ಶಿರಸಂಗಿಯಲ್ಲಿ ತ್ಯಾಗವೀರ ಶ್ರೀ ಲಿಂಗ ರಾಜರ ೧೬೪ ನೆ ಜಯಂತಿ ಆಚರಣೆ

WhatsApp Group Join Now

ಲಿಂಗರಾಜ್ ಹೈ ಸ್ಕೂಲ , ಶಿರಸಂಗಿಯಲ್ಲಿ ತ್ಯಾಗವೀರ ಶ್ರೀ ಲಿಂಗ ರಾಜರ ೧೬೪ ನೆ ಜಯಂತಿ ಆಚರಣೆ ಸ್ಥಳೀಯ ಲಿಂಗರಾಜ ಹೈ ಸ್ಕೂಲ್ ಮೈದಾನದಿಂದ ಊರಿನ ಪ್ರಮುಖ ಬೀದಿಗಳ ಮೂಲಕ ಲಿಂಗರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಆಚರಿಸಲಾಯಿತು, ವಿದ್ಯಾರ್ಥಿಗಳ ಲೇಜಿಮ್ ಮೇಳ ಗಮನ ಸೆಳೆಯಿತು. ತ್ರಿವಳಿ ಗ್ರಾಮಗಳ ಗುರುಹಿರಿಯರು ಎಸ್ ಟಿ ಎಲ್ ಎಸ್ ಎಸ್ ಸಮಿತಿಯ ಚೇರ್ಮನ್ನರು ಆಡಳಿತ ಮಂಡಳಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು ಹಾಗೂ ಶಾಲೆಯ ಸಿಬ್ಬಂದಿ ವರ್ಗ ಕಾನ್ಪೆಂಟ್ ಶಾಲೆಯ ಮಕ್ಕಳು ಶಿಕ್ಷಕಿಯರ ಬಳಗ ಉಪಸ್ಥಿತರಿದ್ದರು.

ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು.ಚೇರ್ ಮನ್ ಶ್ರೀ ವ್ಹಿ. ಎ ಅದೃಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಲಿಂಗರಾಜರ ಜೀವನ ಸಮಾಜಮುಖಿ ಕಾರ್ಯಕ್ರಮಗಳು ಕುರಿತು ಮಾತನಾಡಿದರು. ಶ್ರೀ ಎಸ್.ಎಚ್.ಶಿಂಧೆ. ಶ್ರೀ ಕೆ. ಆಯ್.ಕಲಾಲ್,ಅಶೋಕ ಕುಲಕರ್ಣಿ,ಶ್ರೀ ಎಂ. ಎ.ತೋರಣಗಟ್ಟಿ, ಶ್ರೀ ಆಯ್.ಎಫ್ ಈರನಗೌಡ, ಶ್ರೀ ಎಸ್.ಎಮ್.ಪಾಟೀಲ್, ಶಿವಾನಂದ ತೋರಗಲ್ಲ, ಶ್ರೀ ಬಿ.ಪಿ. ಗಾಣಿಗೇರ, ಶ್ರೀ ಎಚ್ ಕೆ ಗುರ್ಲಕಟ್ಟಿ ಉಪಸ್ಥಿತರಿದ್ದರು.

ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ದಿನದಲಿತರ ಏಳ್ಗೆಗೆ ದಾನ ಮಾಡಿದರು. ಅಂದ ದಾನಿಗಳು ಸಮಾಜದಲ್ಲಿ ಸಿಗುವದು ವಿರಳ ಅವರ ಆದರ್ಶಮಯ ಜೀವನ ನಮಗೆಲ್ಲರಿಗೂ ದಾರಿದೀಪವಾಗಿದೆ. KLE ಮಹಾಸಂಸ್ಥೆ ಹೆಮ್ಮರವಾಗಿ ಬೆಳೆಯಲಿಕ್ಕೆ ಶಿರಸಂಗಿ ದೇಸಾಯಿ ಯವರ ದಾನ ಅವಿಸ್ಮರಣೀಯ ವಾದದ್ದು ಕೃಷಿ ಸುಧಾರಣೆಗಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಅವರ ದೂರ ದೃಷ್ಟಿಗೆ ಹಿಡಿದ ಕನ್ನಡಿ ಆದರ್ಶಮಯ ಜೀವನ ನಡೆಸಿದ ಲಿಂಗರಾಜರು ಸದಾಸ್ಮರಣಿಯರು ಎಂದು ಶ್ರೀ ವ್ಹಿ. ಎ ಅದೃಶಪ್ಪನವರ ಮಾತನಾಡಿದರು.ಶಿಕ್ಷಕ ಎನ್ಎಸ್ ಗುಡಿಸಾಗರ ಕಾರ್ಯಕ್ರಮ ನಿರೂಪಿಸಿದರು ಕೊನೆಯದಾಗಿ ಶ್ರೀಮತಿ ಮೇಘಾ ಪೂಜಾರಿ ವಂದಿಸಿದರು.

About The Author