BREAKING NEWS

ಕಡಿ ತುಂಬಿದ ಟಿಪ್ಪರಿಗೆ ಬೆಂಕಿ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ರಾಮದುರ್ಗ -ಬದಾಮಿ ರಸ್ತೆಯಲ್ಲಿ ಸುರೇಶ ಭರಮಗೌಡ ಪಾಟೀಲ ಎಂಬುವವರರಿಗೆ ಸೇರಿದ ಕಡಿ ತುಂಬಿದ ಟಿಪ್ಪರಿಗೆ ಬೆಂಕಿ ತಗುಲಿದ್ದು , ಜಲವಾಹನದಲ್ಲಿ ಅಗ್ನಿಶಾಮಕ ಠಾಣಾಧಿಕಾರಿರವಾರಾದ ಮಲ್ಲಪ್ಪ ಕವಡಿ, ವೆಂಕಟೇಶ ಕಾಡರ ,ಚಾಲಕರರಾದ ಮಹ್ಮದಾರಿಪ್ ಫಿರಜಾದೆ ,ಪ್ರಕಾಶ ಮೇಟಿ,ಅಗ್ನಿಶಾಮಕರಾದ ವಿನೋದ ಮುರಗೋಡ,ಆನಂದ ಬಂಡಿವಡ್ಡರ, ಶಂಕರ ಲಮಾಣಿ ರವರುಗಳು ಅಗ್ನಿ ಕರೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಅಪಾರ ಪ್ರಮಾಣದ ಹಾನಿಯನ್ನು ತಡೆದಿರುತ್ತಾರೆ,ಯಾವದೇ ರೀತಿಯ ಪ್ರಾಣಪಾಯ ಗಾಯಾಳುಗಳು ಸಂಭವಿಸಿರುವದಿಲ್ಲಾ

Read More

ಸುರೇಬಾನ – ಮನಿಹಾಳ ನೂತನ ಪೊಲೀಸ್ ಠಾಣೆ ಕಟ್ಟದ ಭೂಮಿಪೂಜೆ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ನೂತನ ಪೊಲೀಸ್ ಠಾಣೆಗೆ ಸುಮಾರು ಅಂದಾಜು ಮೊತ್ತ 1 ಕೋಟಿ 37 ಲಕ್ಷ ರೂ ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ಕಾರ್ಯಕ್ರಮವನ್ನು ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನಸಭೆ ಹಾಗೂ ಶಾಸಕರು ರಾಮದುರ್ಗ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಅಶೋಕ ಪಟ್ಟಣಅವರು ನೆರವೇರಿಸಿ ಮಾತನಾಡಿದರು 2018 ರಲ್ಲಿಯೇ ಸುರೇಬಾನ ಉಪ ಠಾಣೆ ಮೇಲ್ದರ್ಜೆಗೇರಿಸಿ, ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಿಸಿದ್ದೇನು. ಅದರ…

Read More

ಸರಕಾರಿ ಪ್ರೌಢ ಶಾಲೆ ಶಿಂದೋಗಿಯಲ್ಲಿ ಪೋಕ್ಕೂ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿಂದೋಗಿ ಸರಕಾರಿ ಪ್ರೌಢ ಶಾಲೆ ಶಿಂದೋಗಿ ಶಾಲೆಯಲ್ಲಿ ಮುಖ್ಯೋಪಾಧ್ಯಯರ ಅಧ್ಯಕ್ಷತೆಯಲ್ಲಿ ಪೋಕ್ಸ್ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. ಪೋಕ್ಕೂ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮದ ಕುರಿತು ನಮ್ಮ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸಿದ್ದು ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ಸದರಿ ಕಾರ್ಯಕ್ರಮದ ನಿರೂಪಣೆಯನ್ನು ವಿ ಬಿ…

Read More

ಹಿರಿಯ ದಿವಾಣಿ ನ್ಯಾಯಾಧೀಶರು ಶ್ರೀಮತಿ. ಬಿ ಟಿ ಅನ್ನಪೂರ್ಣೇಶ್ವರಿ ಇವರು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಜಾಗೃತಿ ಮೂಡಿಸಿದರು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಾಲಿಕೆಯರ ನೂತನ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ರಾಮದುರ್ಗ ಹಾಗೂ ನ್ಯಾಯವಾದಿಗಳ ಸಂಘ, ರಾಮದುರ್ಗ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಂರಕ್ಷಣಾ ಕಾನೂನುಗಳಾದ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ. ಬಾಲಕಾರ್ಮಿಕ…

Read More

ಶಿರಸಂಗಿಯ ಲಿಂಗರಾಜ ಹೈಸ್ಕೂಲ್‌ನಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಜಾಗೃತಿ ಕಾರ್ಯಕ್ರಮ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಲಿಂಗರಾಜ ಹೈಸ್ಕೂಲ್‌ನಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲಕಾರ್ಮಿಕತೆ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಚಾಲನೆ ಮಾಡಲಾಯಿತು. ಸ್ವಾಗತ ಕಾರ್ಯಕ್ರಮವನ್ನು ಎಚ್ ಕೆ ಗುರ್ಲಕಟ್ಟಿ, ಬಸವರಾಜ್ ಕಡಕೋಳ ವಕೀಲರು ಉದ್ಘಾಟನೆ ನೆರವೇರಿಸಿದರು. ಮಾನ್ಯ ಜಿಲ್ಲಾ…

Read More

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಜಾಧವನಗರ ಟಕ್ಕಳಕಿ : ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ-ಶಾಲಾ ಸಂತೆ

ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ-ಶಾಲಾ ಸಂತೆಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಜಾಧವನಗರ ಟಕ್ಕಳಕಿ.ತಾ/ತಿಕೋಟಾ ಜಿ/ವಿಜಯಪುರ.ಶಾಲಾ ಸಂತೆ ಕಾರ್ಯಕ್ರಮವನ್ನು,ವಿಶ್ವಜಿತ.ಜಾಧವ,ಶಿಕ್ಷಣಪ್ರೇಮಿಗಳು ಉದ್ಘಾಟಿಸಿದರು.ಗೋವಿಂದ.ಘಾಟಗೆ,ಎಸ್.ಡಿ.ಎಮ್.ಸಿ ಸದಸ್ಯರುಶಾಲಾ ಸಂತೆ ಕುರಿತು ಮಾರ್ಮಿಕವಾಗಿ ವಿವರಿಸಿದರು. ತೂಕ,ಅಳತೆ,ಲಾಭ,ನಷ್ಟ,ಗಣಿತ ವಿಷಯದ ಲೆಕ್ಕಾಚಾರದ ಕುರಿತು ವಿವರಿಸಿದರು.ಶಿಲ್ಪಾ.ಹಂಜಿ ಗುರುಮಾತೆಯರು,ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು,ಎಂಬಂತೆ ಚಿಕ್ಕಂದಿನಲ್ಲಿರುವಾಗಲೇ,ಮಕ್ಕಳಲ್ಲಿ ಪ್ರಾಯೋಗಿಕ ವ್ಯವಹಾರ ಜ್ಞಾನ,ಶಾಲಾ ಸಂತೆಯಿಂದ ಉಂಟಾಗುತ್ತದೆ ಎಂದು ವಿವರಿಸಿದರು.ಶಾಲಾ ಸಂತೆ ಕಾರ್ಯಕ್ರಮದಲ್ಲಿ,ಕಾಯಿಪಲ್ಲೆ,ಹಣ್ಣುಗಳಾದ,ನಿಂಬೆ,ದ್ರಾಕ್ಷಿ,ಪೇರು,ಚಿಕ್ಕು,ಹುಣಸೆ ಅಂಗಡಿಗಳು,ಕಿರಾಣಾ ಸಾಮಾನಿನ ಅಂಗಡಿಗಳು,ನೋಟ್‌ಬುಕ್‌,ಪೆನ್ನು,ಚೂಡಾ,ಎಳನೀರು,ಮಡಿಕೆ ಕಾಳು,ಕೋತಂಬರಿ,ಕರೀಬೇವು,ಬದನೆ , ನುಗ್ಗೆಕಾಯಿ,ಶೇಂಗಾ,ಮುಂತಾದವುಗಳನ್ನು ತಂದು ಮಕ್ಕಳು ಭಜ೯ರಿಯಾಗಿ ಮಾರಾಟ ಮಾಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷರಾದ,ಜಾಲೀಂದ್ರ.ಘಾಟಗೆ,ಸದಸ್ಯರಾದ ಅಶೋಕ. ನಿಂಬಾಳಕರ,ಮಹಾದೇವ.ಘಾಟಗೆ,ಅಮಿತ.ಚವ್ಹಾಣ,ಸುಭಾಷ.ಜಾಧವ,ಅಣ್ಣಾಸಾಬಗೌಡ.ಬಿರಾದಾರ.ಪೈಗಂಬರ.ಮುಲ್ಲಾ.ಕೃಷ್ಣಾಬಾಯಿ.ಚವ್ಹಾಣ,ಗಂಗೂಬಾಯಿ.ಘಾಟಗೆ,ಪ್ರಜ್ಞಾ.ಜಾಧವ,ಮಯೂರಿ.ಜಾಧವ,ಶೇವಲಾಬಾಯಿ.ಪವಾರ,ವಷಾ೯.ಜಾಧವ,ಮೀನಾಕ್ಷಿ.ಜಾಧವ,ಸೀಮಾಬಾಯಿ.ಲಮಾಣಿ ಮುಂತಾದ ಪಾಲಕರು…

Read More

ಬೆಳಗಾವಿ, ಚಿಕ್ಕೋಡಿಯಲ್ಲಿ “ಭೀಮಗಾಯನ”

ಬೆಳಗಾವಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ(ಮಾ.6) ಚಿಕ್ಕೋಡಿಯ ಐ.ಎಂ.ಎ. ಸಭಾಂಗಣಲ್ಲಿ ಮತ್ತು ಶನಿವಾರ(ಮಾ.7) ಬೆಳಿಗ್ಗೆ 10.30 ಗಂಟೆಗೆ ಬೆಳಗಾವಿ ನಗರದ ಚೆನ್ಮಮ್ಮ ವೃತ್ತದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ “ಭೀಮಗಾಯನ” ಕಾರ್ಯಕ್ರಮ ನಡೆಯಲಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ನಡೆಯಲಿದೆ. ಸಮಾನತೆಯ ಸ್ವರ ಸಂಭ್ರಮ ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು…

Read More

ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸಭೆ

ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಹೋರಾಟಕ್ಕೆ ತಯಾರಾಗಲು ಜಿಲ್ಲಾಧ್ಯಕ್ಷ ಎಸ್ ಜಿ ಸಿದ್ನಾಳ ಕರೆ ‌‌. ಬೈಲಹೊಂಗಲ ನಗರದ ವಿಠ್ಠಲ ರುಕ್ಮಿಣಿ ಸಮುದಾಯ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸಭೆ ಸೇರಿತು ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು ಬಿ ಎಸ್ ತೇಗೂರ ವಹಿಸಿದ್ದರು ಸಭೆಯ ಉದ್ಘಾಟನಾ ಮಾಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಎಸ್ ಜಿ ಸಿದ್ನಾಳ…

Read More

ರಾಮದುರ್ಗ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ರಸ್ತೆ ಡಿವೈಡರ್ ಗಳನ್ನು ತೆರವುಗೊಳಿಸಿದ ರವಿಕುಮಾರ್ ಎಚ್. ಎನ್.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹರಳಯ್ಯ ಸರ್ಕಲ್ ಮುಂದೆ ಇರುವ ಮೇನ್ ರೋಡ್ ಮಧ್ಯದಲ್ಲಿ ಇರ್ತಕ್ಕಂತ ಡಿವೈಡರ್ ಅನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ರವಿಕುಮಾರ್ ಎಚ್. ಎನ್. ಅವರು ತೆರವುಗೊಳಿಸಿದರು. ರಾಮದುರ್ಗದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಡಿವೈಡರ್ಗಳಿಂದಾಗಿ ಲಾರಿ, ಬಸ್, ಇನ್ನೂ ಅನೇಕ ವಾಹನಗಳು ತಿರುವು ಪಡೆಯಲು ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಐದರಿಂದ ಹತ್ತು ಪುಟ ವರೆಗೆ ಡಿವೈಡರ್ ಕತ್ತರಿಸಿ ಎಂದು ಸಮಾಜ ಸೇವಕರು ಹಾಗೂ ಸಂಚಾರಿ ಸತ್ಯ ಪತ್ರಿಕೆ ವರದಿಗಾರರಾದ ಪ್ರಶಾಂತ ಅಂಗಡಿ…

Read More

ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘದ ವಾರ್ಷಿಕ ಮಹಾ ಸಭೆ.

ಸವದತ್ತಿಯ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘದ ವಾರ್ಷಿಕ ಮಹಾಸಭೆಯು ಸೇರಿತು ಸಭೆಯ ಅಧ್ಯಕ್ಷತೆ ಯನ್ನು ಬಿ ವ್ಹಿ ವಾಂಗಿಯವರು ವಹಿಸಿದ್ದರು. ‌‌. ಉದ್ಘಾಟನೆ ಮಾಡಿ ಮಾತನಾಡಿದ ಅಶ್ವಥ್ ವೈದ್ಯ ನಾನು ನಿಮ್ಮೆಲ್ಲರ ಹಿರಿತನವನ್ನು ಗಮನಿಸಿದಾಗ ನಾನು ಚಿಕ್ಕವ ನಿಮ್ಮೆಲ್ಲರ ಆಶೀರ್ವಾದದಿಂದ ಇಲ್ಲಿ ನಿಂತು ಮಾತನಿಡುತ್ತೀದ್ದೇನೆ ನೀವು ನೀಡಿದ ಮನವಿಯನ್ನು ಮತ್ತು ಸಂಘದ ಕಟ್ಟಡದ ಬಗ್ಗೆ ಶಾಸಕರು ವಸಂತ ವೈದ್ಯರಿಗೆ ತಿಳಿಸಿ ನಿಮ್ಮ ಅವಶ್ಯ ಬೇಡಿಕೆಯಾದ ಕಟ್ಟಡ ಬಗ್ಗೆ…

Read More