BREAKING NEWS

ಕಟಕೋಳ ಪೊಲೀಸರು ₹21,02,560 ಲಕ್ಷ ಮೌಲ್ಯದ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೂರು ನೀಡಿದ 48 ಗಂಟೆಯಲ್ಲಿ ಕಟಕೋಳ ಪೊಲೀಸರಿಂದ ಮನೆ ಕಳ್ಳತನ ಪ್ರಕರಣದ ಇಬ್ಬರೂ ಆರೋಪಿತರ ಬಂಧನ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ದಿಲ್ಶಾದ ಸೈದುಸಾಬ ನದಾಫ್ ಅವರ ಮನೆಯಲ್ಲಿ ಇದ್ದ ಬಂಗಾರದ ಕಳ್ಳತನದ ಸಂಬಂಧಿಸಿದಂತೆ ಕಟಕೋಳ ಪೊಲೀಸ್ ಠಾಣಾ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸುವುದರೊಂದಿಗೆ, ಕಳ್ಳತನವಾಗಿದ್ದ 21,02,560/- ಕಿಮ್ಮತ್ತಿನ 154.6ಗ್ರಾಂ ಬಂಗಾರದ ಆಭರಣ ಹಾಗೂ 11,250/- ಕಿಮ್ಮತ್ತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕಃ 05/05/2026 ರಂದು ದಿಲ್ಶಾದ ಸೈದುಸಾಬ ನದಾಫ್ ಇವಳು…

Read More

ಕರೋಶಿ ಆಸ್ಪತ್ರೆ ಮೇಲೆ ರೇಡ್! ಹೈ-ಡೋಸ್ ಔಷಧಿ ನೀಡಿ ಮೋಸ: ನಕಲಿ ವೈದ್ಯರಿಗೆ ಡಿಎಚ್‌ಒ ಶಾಕ್‌!

ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ನಕಲಿ ಡಾಕ್ಟರ್‌ಗಳಿಗೆ ಡಿಎಚ್‌ಒ ತಂಡ ಬಿಗ್ ಶಾಕ್ ಕೊಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ್ ನೇತೃತ್ವದ ಏಳು ತಂಡಗಳು ಒಂದೇ ಟೈಮ್‌ಗೆ ಗ್ರಾಮದ ಆಸ್ಪತ್ರೆ-ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ದಾಖಲೆಗಳು, ಔಷಧಿ, ಚಿಕಿತ್ಸೆ ಪದ್ಧತಿ ಎಲ್ಲವನ್ನೂ ಚೆಕ್‌ ಮಾಡಿದ್ದಾರೆ. ಕೆಲವರು ಮೆಡಿಕಲ್ ಓದಿಲ್ಲ, ಆದರೂ ಡಾಕ್ಟ‌ರ್ ಅಂತ ಕುಳಿತು ಹಾಯ್‌ಡೋಸ್ ಔಷಧಿ ಕೊಡುತ್ತಿದ್ದಾರೆ ಅಂತ ಬಂದ ದೂರು ಮೇರೆಗೆ ಈ ಆಪರೇಷನ್ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಡೆದ ಈ ದಾಳಿಯಲ್ಲಿ…

Read More

ಡ್ರೈವರ್ ಮಗನಿಗೆ ಒಲಿದ ಅದೃಷ್ಟ: ವಿಜಯ್ ಸಾರಥಿಯ ಮಗ ಶಬರಿನಾಥನ್ ಈಗ ಶಾಸಕ!

​ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ (TVK) ಪಕ್ಷ ಕೇವಲ ಗೆಲುವನ್ನಷ್ಟೇ ಸಾಧಿಸುತ್ತಿಲ್ಲ, ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಇದರ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿ ಶಬರಿನಾಥನ್. ಈ ಯುವಕನ ಗೆಲುವಿನ ಹಾದಿ ಮತ್ತು ವಿಜಯ್ ಅವರೊಂದಿಗಿನ ನಂಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 30 ವರ್ಷಗಳ ನಿಷ್ಠೆಗೆ ಸಿಕ್ಕ ಬೆಲೆ​ಶಬರಿನಾಥನ್ ಅವರು ಬೇರಾರೂ ಅಲ್ಲ, ಕಳೆದ 30 ವರ್ಷಗಳಿಂದ ವಿಜಯ್ ಅವರ ನೆರಳಿನಂತೆ ಜೊತೆಗಿದ್ದ ಕಾರು ಚಾಲಕ ಮತ್ತು ಆಪ್ತ…

Read More

ಬಾಗಲಕೋಟೆ 21866 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 21866 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊನೆಯ 23ನೇ ಸುತ್ತಿನಲ್ಲಿ 21866 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಒಟ್ಟು 97941 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76075 ಮತಗಳನ್ನು ಪಡೆಯುವ ಮೂಲಕ ಸೋತಿದ್ದಾರೆ. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು…

Read More

ಗ್ರಾಮೀಣ ಭಾಗಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ರಾಜ್ಯ ಸರಕಾರದ ವತಿಯಿಂದ ಅನೇಕ ಜನಪರ‌‌ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನ‌ಮಟ್ಟ ಸುಧಾರಿಸುವ ಕಾರ್ಯವಾಗುತ್ತಿದೆ. ಚನ್ನಮ್ಮ‌ ಕಿತ್ತೂರಿನಲ್ಲಿ ಉದ್ಘಾಟನೆಗೊಂಡಂತಹ ಹೊಸ ಬಸ್ ಘಟಕದಿಂದ ಈ ಭಾಗದ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು. ಚನ್ನಮ್ಮನ‌ ಕಿತ್ತೂರು ನೂತನ ಬಸ್ ಘಟಕದ ಆವರಣದಲ್ಲಿ ಸೋಮವಾರ ಚನ್ನಮ್ಮನ‌ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟಿಸಿ, ಹೊಸ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಚನ್ನಮ್ಮನ…

Read More

ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಸಮಾರಂಭ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭವನ್ನು ವೇದಿಕೆ ಮೇಲೆ ಇದ್ದಂತ ಎಲ್ಲಾ ಗಣ್ಯರಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ರಾಮಚಂದ್ರ ಶಿರಸಪ್ಪ ಪತ್ತಾರ ನಿವೃತ್ತ ಸೈನಿಕರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸತತ 24 ವರ್ಷಗಳ ಕಾಲ ಭಾರತೀಯ…

Read More

ಶಿರಸಂಗಿ : ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ನಾಗಪ್ಪ ಫ ಜಡಿ ಹಾಗೂ ಸಿದ್ದಪ್ಪ ಮಾ. ಪಣದಿ ಯೋಧರಿಗೆ ಅದ್ದೂರಿ ಸ್ವಾಗತ

ಸತತ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಶಿರಸಂಗಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಯೋಧ ನಾಗಪ್ಪ ಫ ಜಡಿ ಹಾಗೂ ಸಿದ್ದಪ್ಪ ಮಾ. ಪಣದಿ ಅವರಿಗೆ ಶಿರಸಂಗಿ ಗ್ರಾಮದ ಶ್ರೀ ಲಿಂಗರಾಜ ದೇಸಾಯಿ ಅವರ ಅರಮನೆಯಲ್ಲಿ ಆರತಿ…

Read More

ರಾಮದುರ್ಗದಲ್ಲಿ ವಿಶ್ವ ಭೂ ದಿನ ಆಚರಣೆ ಹಾಗೂ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ

ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ, ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 29.04.2026 ರಂದು ಮಧ್ಯಾಹ್ನ 4:00 ಗಂಟೆಗೆ, ತಾಲೂಕು ಪಂಚಾಯಿತಿ ಸಭಾಂಗಣ, ರಾಮದುರ್ಗದಲ್ಲಿ ವಿಶ್ವ ಭೂ ದಿನ ಆಚರಣೆ ಹಾಗೂ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಂಜುನಾಥ ಬಣಕಾರ, ಮಾನ್ಯ ದಿವಾಣಿ ನ್ಯಾಯಾಧೀಶರು, ಜೆಎಂಎಫ್‌ಸಿ ರಾಮದುರ್ಗ ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು…

Read More

ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ ಜರುಗಲಿದೆ. ದಿವ್ಯಸಾನಿಧ್ಯ : ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಮುಳ್ಳೂರ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟಕರು : ಜನಪ್ರಿಯ ಶಾಸಕರು ಸವದತ್ತಿ ವಿಶ್ವಾಸ…

Read More

ಗೋಮಾತೆ ಗೌರವ ಅಭಿಮಾನ ನಡೆಸುವ ಮೂಲಕ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ರಾಮದುರ್ಗ್ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿ ಅವರಿಗೆ ಗೋಮಾತೆಯ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮೆರವಣಿಗೆ ಮುಖಾಂತರ ಹಸು ಕರೆತಂದು ಜಾಗೃತಿ ಮೂಡಿಸಲಾಯಿತು ಗೋಗಳಿಗೆ ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಗುರುತಿನ ಗೌರವಣಿತ ಸ್ನಾನ ನೀಡಬೇಕು ಗೋಗುಳು ಸೇವೆಗಾಗಿ ಕಾನೂನು ರೂಪಿಸಬೇಕು ದೇಶಾದ್ಯಂತ ಗೋ ಹತ್ಯೆ ಸಂಪೂರ್ಣ ನಿಷೇಧಿಸಬೇಕು ಕೋಮುತ್ರಕ್ಕೆ ಸಂಬಂಧಿಸಿದಂತೆ ಸಂಸ್ಕರಣ ಘಟಕ ಉತ್ತೇಜಿಸುವ ಮೂಲಕ ಹೊಸ ಸಂಶೋಧನೆ ನಡೆಸಬೇಕು ಶಾಪಿಂಗ್ ಮಾಲ್ಗಳಲ್ಲಿ ಗೋ ಆಧಾರಿತ ಉತ್ಪನ್ನಗಳಿಗೆ ಕಡ್ಡಾಯ ಕೌಂಟರ್ ರಚಿಸಬೇಕು ಗೋಶಾಲ ಗಳಿಗೆ ಹೆಚ್ಚಿನ…

Read More