ಮಾ.18 ರಿಂದ ಏ.2ರವರಿಗೆ ಜಿಲ್ಲೆಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ : ವ್ಯವಸ್ಥಿತ, ಸುಸೂತ್ರ, ಪಾರದರ್ಶಕ ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
ವಿಜಯಪುರ ಇದೇ ಮಾರ್ಚ್ 18 ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸಬೇಕೆಂದು ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಹಾಗೂ ನಿರ್ವಹಣೆ ಕುರಿತ…
ಮಹಿಳಾ ದಿನಾಚರಣೆಯ : ಸ್ತ್ರೀ ಪುರುಷರು ಸಮಾನತೆ ಇದೆ ವಾಗ್ದೇವಿತಾಯಿ.
ಬೆಳಗಾವಿ ಸ್ತ್ರೀ ಪುರುಷ ಭೇದಭಾವವಿಲ್ಲ ಶರಣಲಿಂಗಿ ಎಂದರೆ ಪ್ರಾಣಶಕ್ತಿ, ಸೃಷ್ಟಿಯಲ್ಲಿ. ಮನೆ ಎಂದರೆ ಸ್ತ್ರೀ ಇರಬೇಕು ಸಹ ಧಮಿ೯ಣಿ ಎಂದರೆ.ಧಮ೯ಪ್ರಾರಂಭವಾಗುವುದು ಮನಸ್ಸೆ,ಇಬ್ಬರಲ್ಲೂ ಸ್ತ್ರೀ ,ಪುರುಷ,ಇದ್ದಾನೆ.ಅಹಂಕಾರ ಜಾಸ್ತಿ ಆಗಬಾರದು.ಸ್ವಯಂಶಕ್ತಿ ಬೆಳೆಸಿಕೊಂಡು ಸ್ವಾಭಿಮಾನಿಯಾಗಬೇಕು.ಸತಿ ಎಂದರೆ ಸವ೯ ಸಮರ್ಪಣೆ,ತನು,ಮನ ಎಲ್ಲಅಪ೯ಣೆ.ಮಾತೃಶಕ್ತಿ,ವಾತ್ಸಲ್ಯ ಸಹನೆ,ಪ್ರೀತಿ,ತಾಳ್ಮೆ,ಆರೈಕೆ,ಸ್ವಾಂತನ ಗುಣಗಳನ್ನು ತನ್ನ ಜನನದಿಂದಲೇ ಮೈಗೂಡಿಸಿಕೊಂಡು ಬಂದಿದ್ದಾಳೆ. ಸ್ತ್ರೀ ಸಾಗರವಿದಂತೆ,ಪುರುಷ ಅದರಲ್ಲಿನ ಅಲೆ ಇದ್ದಂತೆ.ನಿಮಾ೯ಣ,ನಿವ೯ಹಣೆ,ನಿನಾ೯ಮ ಸ್ತ್ರೀ ಯಿಂದಲೇ.ಎಂದು ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ಮಹಿಳಾ ದಿನಾಚರಣೆಯ ನಿಮಿತ್ಯ ಶರಣೆ…
ಸರ್ಕಾರಿ ಪ್ರೌಢ ಶಾಲೆ ಕಗದಾಳದಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ,ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಕಾನೂನು ಅರಿವು” ಕಾರ್ಯಕ್ರಮ.
ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ಹಲವು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಪಾಲಕರು ಮತ್ತು ಮಕ್ಕಳಲ್ಲಿ ಕಾನೂನು ಅರಿವಿನ ಅಗತ್ಯತೆ ಇದೆ ಎಂದು ನ್ಯಾಯವಾದಿ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟರು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಗದಾಳದಲ್ಲಿ ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ,ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಸಹಾಯವಾಣಿ, ಸುರಕ್ಷಿತ…
ಮೀಡಿಯಾ ಫೆಸ್ಟ್ 2026 ರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ.
ಧಾರವಾಡ ಸ್ಪರ್ಧಾತ್ಮಕತೆಯನ್ನು ಹೊಂದಿದ ಕ್ಷೇತ್ರ ಪತ್ರಿಕೋದ್ಯಮವಾಗಿದೆ. ದಿನಪತ್ರಿಕೆಗಳು ದಿನನಿತ್ಯ ಸುದ್ಧಿ, ಜಾಹೀರಾತು, ಪ್ರಕಟಣೆಯಲ್ಲಿ ಪಾರದರ್ಶಕತೆ ಹಾಗೂ ಸಮಾಜದ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಪತ್ರಕರ್ತರು ಪಾರದರ್ಶಕವಾಗಿ ಸುದ್ದಿಗಳನ್ನು ಪ್ರಕಟಿಸುವದರಿಂದ ಅನೇಕ ಸಾಮಾಜಿಕ ತೊಡಕುಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ ಅವರು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮೀಡಿಯಾ ಫೆಸ್ಟ್ 2026 ರ ಸಮಾರೋಪ ಹಾಗೂ…
ಕಡಿ ತುಂಬಿದ ಟಿಪ್ಪರಿಗೆ ಬೆಂಕಿ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ರಾಮದುರ್ಗ -ಬದಾಮಿ ರಸ್ತೆಯಲ್ಲಿ ಸುರೇಶ ಭರಮಗೌಡ ಪಾಟೀಲ ಎಂಬುವವರರಿಗೆ ಸೇರಿದ ಕಡಿ ತುಂಬಿದ ಟಿಪ್ಪರಿಗೆ ಬೆಂಕಿ ತಗುಲಿದ್ದು , ಜಲವಾಹನದಲ್ಲಿ ಅಗ್ನಿಶಾಮಕ ಠಾಣಾಧಿಕಾರಿರವಾರಾದ ಮಲ್ಲಪ್ಪ ಕವಡಿ, ವೆಂಕಟೇಶ ಕಾಡರ ,ಚಾಲಕರರಾದ ಮಹ್ಮದಾರಿಪ್ ಫಿರಜಾದೆ ,ಪ್ರಕಾಶ ಮೇಟಿ,ಅಗ್ನಿಶಾಮಕರಾದ ವಿನೋದ ಮುರಗೋಡ,ಆನಂದ ಬಂಡಿವಡ್ಡರ, ಶಂಕರ ಲಮಾಣಿ ರವರುಗಳು ಅಗ್ನಿ ಕರೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಅಪಾರ ಪ್ರಮಾಣದ ಹಾನಿಯನ್ನು ತಡೆದಿರುತ್ತಾರೆ,ಯಾವದೇ ರೀತಿಯ ಪ್ರಾಣಪಾಯ ಗಾಯಾಳುಗಳು ಸಂಭವಿಸಿರುವದಿಲ್ಲಾ
ಸುರೇಬಾನ – ಮನಿಹಾಳ ನೂತನ ಪೊಲೀಸ್ ಠಾಣೆ ಕಟ್ಟದ ಭೂಮಿಪೂಜೆ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ನೆರವೇರಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ನೂತನ ಪೊಲೀಸ್ ಠಾಣೆಗೆ ಸುಮಾರು ಅಂದಾಜು ಮೊತ್ತ 1 ಕೋಟಿ 37 ಲಕ್ಷ ರೂ ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ಕಾರ್ಯಕ್ರಮವನ್ನು ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನಸಭೆ ಹಾಗೂ ಶಾಸಕರು ರಾಮದುರ್ಗ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಅಶೋಕ ಪಟ್ಟಣಅವರು ನೆರವೇರಿಸಿ ಮಾತನಾಡಿದರು 2018 ರಲ್ಲಿಯೇ ಸುರೇಬಾನ ಉಪ ಠಾಣೆ ಮೇಲ್ದರ್ಜೆಗೇರಿಸಿ, ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಿಸಿದ್ದೇನು. ಅದರ…
ಸರಕಾರಿ ಪ್ರೌಢ ಶಾಲೆ ಶಿಂದೋಗಿಯಲ್ಲಿ ಪೋಕ್ಕೂ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿಂದೋಗಿ ಸರಕಾರಿ ಪ್ರೌಢ ಶಾಲೆ ಶಿಂದೋಗಿ ಶಾಲೆಯಲ್ಲಿ ಮುಖ್ಯೋಪಾಧ್ಯಯರ ಅಧ್ಯಕ್ಷತೆಯಲ್ಲಿ ಪೋಕ್ಸ್ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು. ಪೋಕ್ಕೂ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕತೆ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮದ ಕುರಿತು ನಮ್ಮ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸಿದ್ದು ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ಸದರಿ ಕಾರ್ಯಕ್ರಮದ ನಿರೂಪಣೆಯನ್ನು ವಿ ಬಿ…
ಹಿರಿಯ ದಿವಾಣಿ ನ್ಯಾಯಾಧೀಶರು ಶ್ರೀಮತಿ. ಬಿ ಟಿ ಅನ್ನಪೂರ್ಣೇಶ್ವರಿ ಇವರು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಜಾಗೃತಿ ಮೂಡಿಸಿದರು
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಾಲಿಕೆಯರ ನೂತನ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ರಾಮದುರ್ಗ ಹಾಗೂ ನ್ಯಾಯವಾದಿಗಳ ಸಂಘ, ರಾಮದುರ್ಗ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಂರಕ್ಷಣಾ ಕಾನೂನುಗಳಾದ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ. ಬಾಲಕಾರ್ಮಿಕ…
ಶಿರಸಂಗಿಯ ಲಿಂಗರಾಜ ಹೈಸ್ಕೂಲ್ನಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಜಾಗೃತಿ ಕಾರ್ಯಕ್ರಮ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಲಿಂಗರಾಜ ಹೈಸ್ಕೂಲ್ನಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲಕಾರ್ಮಿಕತೆ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಚಾಲನೆ ಮಾಡಲಾಯಿತು. ಸ್ವಾಗತ ಕಾರ್ಯಕ್ರಮವನ್ನು ಎಚ್ ಕೆ ಗುರ್ಲಕಟ್ಟಿ, ಬಸವರಾಜ್ ಕಡಕೋಳ ವಕೀಲರು ಉದ್ಘಾಟನೆ ನೆರವೇರಿಸಿದರು. ಮಾನ್ಯ ಜಿಲ್ಲಾ…
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಜಾಧವನಗರ ಟಕ್ಕಳಕಿ : ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ-ಶಾಲಾ ಸಂತೆ
ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ-ಶಾಲಾ ಸಂತೆಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಜಾಧವನಗರ ಟಕ್ಕಳಕಿ.ತಾ/ತಿಕೋಟಾ ಜಿ/ವಿಜಯಪುರ.ಶಾಲಾ ಸಂತೆ ಕಾರ್ಯಕ್ರಮವನ್ನು,ವಿಶ್ವಜಿತ.ಜಾಧವ,ಶಿಕ್ಷಣಪ್ರೇಮಿಗಳು ಉದ್ಘಾಟಿಸಿದರು.ಗೋವಿಂದ.ಘಾಟಗೆ,ಎಸ್.ಡಿ.ಎಮ್.ಸಿ ಸದಸ್ಯರುಶಾಲಾ ಸಂತೆ ಕುರಿತು ಮಾರ್ಮಿಕವಾಗಿ ವಿವರಿಸಿದರು. ತೂಕ,ಅಳತೆ,ಲಾಭ,ನಷ್ಟ,ಗಣಿತ ವಿಷಯದ ಲೆಕ್ಕಾಚಾರದ ಕುರಿತು ವಿವರಿಸಿದರು.ಶಿಲ್ಪಾ.ಹಂಜಿ ಗುರುಮಾತೆಯರು,ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು,ಎಂಬಂತೆ ಚಿಕ್ಕಂದಿನಲ್ಲಿರುವಾಗಲೇ,ಮಕ್ಕಳಲ್ಲಿ ಪ್ರಾಯೋಗಿಕ ವ್ಯವಹಾರ ಜ್ಞಾನ,ಶಾಲಾ ಸಂತೆಯಿಂದ ಉಂಟಾಗುತ್ತದೆ ಎಂದು ವಿವರಿಸಿದರು.ಶಾಲಾ ಸಂತೆ ಕಾರ್ಯಕ್ರಮದಲ್ಲಿ,ಕಾಯಿಪಲ್ಲೆ,ಹಣ್ಣುಗಳಾದ,ನಿಂಬೆ,ದ್ರಾಕ್ಷಿ,ಪೇರು,ಚಿಕ್ಕು,ಹುಣಸೆ ಅಂಗಡಿಗಳು,ಕಿರಾಣಾ ಸಾಮಾನಿನ ಅಂಗಡಿಗಳು,ನೋಟ್ಬುಕ್,ಪೆನ್ನು,ಚೂಡಾ,ಎಳನೀರು,ಮಡಿಕೆ ಕಾಳು,ಕೋತಂಬರಿ,ಕರೀಬೇವು,ಬದನೆ , ನುಗ್ಗೆಕಾಯಿ,ಶೇಂಗಾ,ಮುಂತಾದವುಗಳನ್ನು ತಂದು ಮಕ್ಕಳು ಭಜ೯ರಿಯಾಗಿ ಮಾರಾಟ ಮಾಡಿದರು.ಎಸ್.ಡಿ.ಎಮ್.ಸಿ ಅಧ್ಯಕ್ಷರಾದ,ಜಾಲೀಂದ್ರ.ಘಾಟಗೆ,ಸದಸ್ಯರಾದ ಅಶೋಕ. ನಿಂಬಾಳಕರ,ಮಹಾದೇವ.ಘಾಟಗೆ,ಅಮಿತ.ಚವ್ಹಾಣ,ಸುಭಾಷ.ಜಾಧವ,ಅಣ್ಣಾಸಾಬಗೌಡ.ಬಿರಾದಾರ.ಪೈಗಂಬರ.ಮುಲ್ಲಾ.ಕೃಷ್ಣಾಬಾಯಿ.ಚವ್ಹಾಣ,ಗಂಗೂಬಾಯಿ.ಘಾಟಗೆ,ಪ್ರಜ್ಞಾ.ಜಾಧವ,ಮಯೂರಿ.ಜಾಧವ,ಶೇವಲಾಬಾಯಿ.ಪವಾರ,ವಷಾ೯.ಜಾಧವ,ಮೀನಾಕ್ಷಿ.ಜಾಧವ,ಸೀಮಾಬಾಯಿ.ಲಮಾಣಿ ಮುಂತಾದ ಪಾಲಕರು…
