ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಕಲ್ಮೇಶ್ವರ ನೂತನ ಮಹಾರಥೋತ್ಸವ ಅದ್ಧೂರಿಯಾಗಿ ಜರಗಿತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಗುರು ಕಲ್ಮೇಶ್ವರ ಅಜ್ಜನವರ ನೂತನ ಮಹಾರಥೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.ಮುಳ್ಳೂರು ಹಿರೇಮಠ, ತೋರಗಲ್ಲ ಗಚ್ಚಿನ ಹಿರೇಮಠ ಹಾಗೂ ಕಲ್ಲಾಪುರ ಹಿರೇಮಠದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳಾದ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಹಾಗೂ ಚಿಕ್ಕುಂಬಿ ಕೈಲಾಸ ನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನೂತನ ಮಹಾರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಕಲ್ಮೇಶ್ವರ ಅಜ್ಜನವರ ದರ್ಶನ ಪಡೆದು ಭಕ್ತಿಭಾವ…
ಜಾಣಗೆರೆ ೭೫: ಸಂಭ್ರಮದ ವೇದಿಕೆಯಲ್ಲಿ ಮತ್ತೆ ಮೊಳಗಿದ ಹೋರಾಟದ ಘೋಷಣೆ!
ಹೋರಾಟಗಾರನಿಗೆ ಸನ್ಮಾನವಲ್ಲ, ಹೋರಾಟದ ಪರಂಪರೆಗೆ ಪುನರ್ಜಾಗೃತಿ — ಜಾಣಗೆರೆಯವರ ೭೫ಕ್ಕೆ ಸಾಕ್ಷಿಯಾದ ಬೆಂಗಳೂರು ಬೆಂಗಳೂರು ೨೯: ಅದು ಕೇವಲ ೭೫ರ ಸಂಭ್ರಮವಾಗಿರಲಿಲ್ಲ.ತಲೆಮಾರಿನ ಹೋರಾಟದ ನೆನಪುಗಳನ್ನು ಮತ್ತೆ ಕೆದಕಿದ ದಿನ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದ ಹೋರಾಟಗಾರನ ಬದುಕಿಗೆ ಗೌರವ ಸಲ್ಲಿಸುವ ನೆಪದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾದ ಕಾಲ ಬಂದಿದೆ ಎಂಬ ಎಚ್ಚರಿಕೆಯೂ ಮೊಳಗಿದ ದಿನ. ಅದು ಜಾಣಗೆರೆ ವೆಂಕಟರಾಮಯ್ಯ ಅವರ ೭೫ರ ಸಂಭ್ರಮಕ್ಕೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಿಂದಲೇ…
ಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಸಭಾಪತಿ!
ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರು ಹಾಗೂ ಗಣ್ಯರು ಆಗಮಿಸಿದಾಗ, ತಮ್ಮ ಭಾಷಣ ಮುಗಿಸಿ ಮತ್ತೊಂದು ಕಾರ್ಯಕ್ರಮ ಅಥವಾ ತುರ್ತು ಕೆಲಸದ ನೆಪದಲ್ಲಿ ಕಾರ್ಯಕ್ರಮ ಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸುವುದು ಕಂಡುಬರುತ್ತದೆ. ಆದರೆ ‘ಜಾಣಗೆರೆ–75’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಇದಕ್ಕೆ ತದ್ವಿರುದ್ಧವಾದ ನಡೆ ತೋರುವ ಮೂಲಕ ಗಮನ ಸೆಳೆದರು.ಜಾಣಗೆರೆ ವೆಂಕಟರಾಮಯ್ಯ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿದ ಬಳಿಕ ಸಲೀಂ ಅಹ್ಮದ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಲಿದ್ದಾರೆ ಎಂದೇ ಅಲ್ಲಿದ್ದವರು ಭಾವಿಸಿದ್ದರು….
ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಣೆ
ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಣೆ – ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ -ರಾಹುಲ್ ಜಾರಕಿಹೊಳಿ ಕಾಕತಿ (ಬೆಳಗಾವಿ ): ವಿಶೇಷ ಚೇತನ ಮಕ್ಕಳಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಿ ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳ ಸಹಕಾರದಿಂದ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಾಯಕವಾಗುವ ವಿಶೇಷ ಚಿಟ್ಗಳನ್ನು ಬಡ ಸರಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ವಿತರಿಸುತ್ತಿರುವುದು ಉತ್ತಮ ಕೆಲಸವಾಗಿದ್ದು ಈ ಸೌಲಭ್ಯಗಳನ್ನು ಸರುಪಯೋಗಪಡಿಸಿಕೊಂಡು ಮಕ್ಕಳನ್ನು ಶೈಕ್ಷಣಿಕವಾಗಿ…
ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದಾರೆ: ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ
ಸ್ಥಳೀಯ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ ಬೆಟಗೇರಿ: ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ಅ.೨೮ರಂದು ನಡೆದ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ…
ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬ ಆಚರಣೆ.!
ಸಹೋದರ-ಸಹೋದರಿಯರಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ: ರಮೇಶ ಅಳಗುಂಡಿ ಅಭಿಪ್ರಾಯ ಬೆಟಗೇರಿ:ನಮ್ಮ ನಾಡಿನಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳು ತನ್ನದೇ ಆದ ವೈಜ್ಞಾನಿಕ, ಪೌರಾಣಿಕ, ಈತಿಹಾಸಿಕ ಹಾಗೂ ಐತಿಹಾಸಿಕ ಪರಂಪರೆಯ ಹಿನ್ನಲೆಗಳನ್ನೊಳಗೊಂಡಿವೆ. ಈ ಹಬ್ಬಗಳಲ್ಲಿ ರಕ್ಷಾ ಬಂಧನ ಹಬ್ಬವೂ ಒಂದು. ಸಹೋದರ-ಸಹೋದರಿಯರಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಅ.೨೮ರಂದು ನಡೆದ ರಕ್ಷಾ ಬಂಧನ ಹಬ್ಬ…
ರಾಮದುರ್ಗ ಪಟ್ಟಣದಲ್ಲಿ ವಿಜಯ ಸೇನಾ ಸಮಿತಿ ವತಿಯಿಂದ ವಿಶೇಷವಾಗಿ ರಕ್ಷಾ ಸಂಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಗಣೇಶ ಹೋಟೆಲ್ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರ–ಸಹೋದರಿಯರ ಬಾಂಧವ್ಯವನ್ನು ಸಾರುವ ರಕ್ಷಾ ಸಂಸ್ಕಾರ ನೆರವೇರಿಸಲಾಯಿತು. ಸಹೋದರಿಯರು ಮೊದಲು ಸಹೋದರರ ಹಣೆಗೆ ಕುಂಕುಮದ ತಿಲಕವಿಟ್ಟು, ದೀಪದಿಂದ ಆರತಿ ಬೆಳಗಿ ಶುಭ ಹಾರೈಸಿದರು. ಬಳಿಕ ಸಹೋದರನ ಬಲಗೈ ಮಣಿಕಟ್ಟಿಗೆ ಪವಿತ್ರವಾದ ರಾಖಿಯನ್ನು ಕಟ್ಟಿ ಸಹೋದರತ್ವದ ಸಂಕೇತವನ್ನು ಮೆರೆದರು. ರಕ್ಷಾ ಸಂಸ್ಕಾರವು ಕೇವಲ ರಕ್ತಸಂಬಂಧಕ್ಕೆ ಸೀಮಿತವಲ್ಲ. ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಸಂಸ್ಕಾರವಾಗಿದೆ. ವಿಜಯ ಸೇನಾ ಸಮಿತಿ ವತಿಯಿಂದ…
ನಟಿ ,ನಿರ್ದೇಶಕಿ, ನಿರ್ಮಾಪಕಿ ಹಾಗೂ ಕನ್ನಡ ಹಿಂದಿ ಭಾಷೆಯ ಸಾಹಿತಿ, ಕವಯಿತ್ರಿ ಪ್ರೇಮಾ ನಡುವಿನಮನಿ ಅವರಿಗೆಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ)ವತಿಯಿಂದ ಧಾರವಾಡದ ಆಲೂರ ವೆಂಕಟರಾಯರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2026ಪ್ರೇಮಾ ನಡುವಿನಮನಿ ಅವರು ಬರದ ಹಾಡು ‘ ಮೊದಲ ಭೇಟಿ ‘ ಅವರೇ ನಿರ್ಮಿಸಿ, ಅಭಿನಯಿಸಿದ , ಸ್ವಾತಿ ಸ್ಟುಡಿಯೋ ‘ ಪ್ರಸ್ತುತ ಪಡಿಸಿದ ಮತ್ತು ನೃತ್ಯ ನಿರ್ದೇಶಕ ಶ್ರೀ ಪ್ರಕಾಶ ಕ್ಷತ್ರಿಯ ನಿರ್ದೇಶನ ಮಾಡಿದ ಹಾಗೂ ಶ್ರೀ ಸಿದ್ದು ಹಿರೇಮಠ ಚಿತ್ರೀಕರಣ ಮಾಡಿದಮ್ಯೂಸಿಕ್ ವಿಡಿಯೋ ಅಲ್ಬಮ್ ಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ ಹಿರಿಯ ನಟ, ಪರಿಸರವಾದಿ, ಜೀವಮಾನ…
ಬುಡಾ ನೂತನ ಅಧ್ಯಕ್ಷ, ಶಾಸಕ ಆಸೀಫ್ ಸೇಠರನ್ನು ಅಭಿನಂದಿಸಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕಆಸಿಫ್ (ರಾಜು) ಸೇಠ್ ಅವರನ್ನು ಮಹಾನಗರ ಪಾಲಿಕೆ ಆಯುಕ್ತರು, ನಗರ ಸೆವಕರು, ಅಧಿಕಾರಿಗಳು ಅಭಿನಂದಿಸಿ ಶುಭಾಶಯ ಕೋರಿದರು.ನಗರದ ಬುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರನ್ನು ಭೇಟಿಯಾದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ವಿಭಾಗದ ಉಪ ಆಯುಕ್ತ, ಉದಯಕುಮಾರ ಟಿ.ಬಿ.,ಅಭಿವೃದ್ಧಿ ವಿಭಾಗದ ಉಪ ಆಯುಕ್ತೆಲಕ್ಷ್ಮೀ ನಿಪ್ಪಾಣಿಕರ್,ವಲಯ ಆಯುಕ್ತ ಅನೀಲ ಬೋರ್ಗಾವಿ, ನಗರ ಸೇವಕರಾದ…
ಕಸಾಪ ರಾಜ್ಯಾಧ್ಯಕ್ಷರಾದರೆ ೭೫ರ ಸಮಾರಂಭ ಅರ್ಥಪೂರ್ಣ
ಬೆಂಗಳೂರು: ಜಾಣಗೆರೆಯವರ ೭೫ರ ಸಂಭ್ರಮಕ್ಕೆ ಅರ್ಥ ತುಂಬಬೇಕಾದರೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಗತ್ಯ ಕನ್ನಡದ ಅಸ್ಮಿತೆ, ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡಪರ ಹೋರಾಟದ ಧ್ವನಿಯಾಗಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ ೭೫ನೇ ವರ್ಷದ ಅಭಿನಂದನಾ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ವಿವಿದ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಆಗಸ್ಟ್ ೨೯ ರಂದು ನಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜಾಣಗೆರೆಯವರ ಅಭಿನಂದನಾ ಕಾರ್ಯಕ್ರಮ ನಡೆದಿರುವುದು…
