ವಿಬಿಜಿ ರಾಮ್ಜಿ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ದೊರೆತ 14 ನಿಧಿ ನಾಣ್ಯಗಳನ್ನು ಇಂಚಲ ಗ್ರಾಪಂ ಕಾರ್ಯಾಲಯಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ ಘಟನೆ ನಡೆದಿದೆ.
ಚಿತ್ರದಲ್ಲಿರುವ ನಾಣ್ಯಗಳು ಗಂಗರ ಕಾಲದ ತಲಕಾಡಿನ ಪಶ್ಚಿಮ ಗಂಗರು ಅಥವಾ ವಿಜಯನಗರ ಸಾಮ್ರಾಜ್ಯ ಕಾಲದ ಚಿನ್ನದ ನಾಣ್ಯಗಳಾಗಿವೆ. ‘ಗಜಪತಿ ವರಹ,’ವರಹ, ಪಗಡ ನಾಣ್ಯಗಳು ಇವೆ.ನಾಣ್ಯಗಳ ಮೇಲ್ಭಾಗದಲ್ಲಿ ಅಲಂಕೃತಗೊಂಡ ಆನೆಯ ಚಿತ್ರವಿದೆ. ಗಂಗರ ರಾಜಲಾಂಛನವು ಮದಜಲ ಸುರಿಸುವ ಆನೆಯಾಗಿದ್ದು, ಇವುಗಳನ್ನು ‘ಗಜಪತಿ ಗದ್ಯಾಣ ಗಜಪತಿ ವರಹ ಎಂದು ಕರೆಯಲಾಗುತ್ತಿತ್ತು.ಸುಮಾರು ಕ್ರಿ.ಶ. 10ನೇ ಶತಮಾನದಿಂದ 15ನೇ ಶತಮಾನದ ಮಧ್ಯಕಾಲೀನ ಕರ್ನಾಟಕ ಅವಧಿಗೆ ಸೇರಿದವು. ಇವು ಅಪರಂಜಿ ಚಿನ್ನದ ನಾಣ್ಯಗಳಾಗಿವೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದ ಬಿ.ಸಿ.ಎಂ. ಹಾಸ್ಟೆಲ್…
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಸಾಯಿಖಾನೆಗಳ ಕಾರ್ಯಾಚರಣೆ ಆರೋಪ – ಕ್ರಮಕ್ಕೆ ಆಗ್ರಹಿಸಿ ಮನವಿ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಕೆಲವೆಡೆ ಕಾನೂನು ಉಲ್ಲಂಘಿಸಿ ಕಸಾಯಿಖಾನೆಗಳ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ಜಂಟಿಯಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗೋಹತ್ಯೆ ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಗೋವುಗಳ ಸಾಗಾಟ ನಡೆಯುತ್ತಿದ್ದರೆ ಅದನ್ನು ತಡೆಯಬೇಕು. ಇಂತಹ ಚಟುವಟಿಕೆಗಳಿಗೆ ಸಹಕರಿಸುವವರ…
ಶ್ರೀ ಕೃಷ್ಣ ಹಾಗೂ ಕರ್ಣನ ನಡುವೆ ನಡೆದ ಈ ಸಂಭಾಷಣೆ ಕೇಳಿದರೆ ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.
ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ.. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು.. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ.. ಕೃಷ್ಣ ಕರ್ಣನಿಗೆ ಹೇಳಿದ ಒಂದಿಷ್ಟು ಸಂದೇಶಾತ್ಮಕ ಮಾತುಗಳು:-ಅಂದು ಕರ್ಣ ಕೃಷ್ಣನಿಗೆ ಹೇಳಿದ, “ನನ್ನ ಬದುಕೇ ಒಂದು ಅಗ್ನಿಕುಂಡ. ಸಾಮಾಜಿಕ ವಲಯದಲ್ಲಿ ಒಂದು ಮುಳ್ಳಿನ ಬೇಲಿ. , ನನ್ನ ಹುಟ್ಟು ?ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು.ತಾಯಿಯ ತನ್ನ ಕೂತುಹಲದ ಪರೀಕ್ಷೆಗಾಗಿ,ಅಕ್ರಮ ಸಂತಾನವಾಗಿ, ಹುಟ್ಟಿದ್ದು ನನ್ನ ತಪ್ಪೆ?” “ಸೂತಕುಲ, ಬಡಬಗ್ಗರ…
ಬಸವಣ್ಣನವರು ಪಾರದರ್ಶಕ ನಾಯಕ. ಯು ಎಸ್ ಸಂಗನಾಳಮಠ.
ಬೆಳಗಾವಿ ನಾವು ಸಮಾಧಾನವಾಗಿರಬೇಕು ನಾನು ಎಂಬುದು ತೆಗೆದು ನಾವು ಆಗಬೇಕು ಕೇಳಬಾರದನ್ನ ಕೇಳುತ್ತಾ ನೋಡಬಾರದು ನೋಡಿದರೆ ಆಗಬಾರದು ಆಗುತ್ತೆ ನನಗೆ ಸಂಯಮ ಜೀವನ ಅಗತ್ಯ. ನಡೆ ನುಡಿ. ಒಂದಾಗಬೇಕು. ತನ್ನನ್ನು ತಾನು. ಅರ್ಪಿಸಿಕೊಂಡು. ಶರಣಾಗತಿ ಆಗಬೇಕು. ವೈಚ್ಚಾರಿಕವನ್ನು ಬುದ್ಧ ನೀಡಿದರು. ಆರನೆಯ ಶತಮಾನ ಪಾಲಿಭಾಷೆಯಲ್ಲಿ. ಬುದ್ಧಂ ಶರಣಂ ಗಚ್ಛಾಮಿ ದಯೆ, ಅಂಹಿಸೆ ,ಇದೆ.ಸಮಾಜ ಎಚ್ಚರಿಸಲು ಬುದ್ಧ ಬಸವ ಬಂದರು.ಬಸವಣ್ಣನವರನ್ನು ಪಾರದಶ೯ಕ ನಾಯಕ ಎಂದು ಕರೆದರು.ಪಾರದಶ೯ಕ ನಡಾವಳಿಗಳು ತಂದು ವಿಶ್ವ ಗುರುವಾದರು ಎಂದು ಸಂಗನಾಳಮಠ ಅವರು ಇಂದು ತನ್ಮಯ…
ಬಸವರಾಜ ಕರೆಪ್ಪಗೊಳ ಅವರಿಗೆ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ ಆಂಗ್ಲ ಭಾಷೆ ಶಿಕ್ಷಕ ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಸನ್ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಸ್ಥಳೀಯ ವಿದ್ಯಾಲಯದ ಹೈಸ್ಕೂಲ್ ವಿಭಾಗದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದ್ಯಸರು ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಬಸವರಾಜ ಕರೆಪ್ಪಗೊಳ ಅವರ ಸಾಧನೆ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಕಲ್ಮೇಶ್ವರ ನೂತನ ಮಹಾರಥೋತ್ಸವ ಅದ್ಧೂರಿಯಾಗಿ ಜರಗಿತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಗುರು ಕಲ್ಮೇಶ್ವರ ಅಜ್ಜನವರ ನೂತನ ಮಹಾರಥೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.ಮುಳ್ಳೂರು ಹಿರೇಮಠ, ತೋರಗಲ್ಲ ಗಚ್ಚಿನ ಹಿರೇಮಠ ಹಾಗೂ ಕಲ್ಲಾಪುರ ಹಿರೇಮಠದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳಾದ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಹಾಗೂ ಚಿಕ್ಕುಂಬಿ ಕೈಲಾಸ ನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನೂತನ ಮಹಾರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಕಲ್ಮೇಶ್ವರ ಅಜ್ಜನವರ ದರ್ಶನ ಪಡೆದು ಭಕ್ತಿಭಾವ…
ಜಾಣಗೆರೆ ೭೫: ಸಂಭ್ರಮದ ವೇದಿಕೆಯಲ್ಲಿ ಮತ್ತೆ ಮೊಳಗಿದ ಹೋರಾಟದ ಘೋಷಣೆ!
ಹೋರಾಟಗಾರನಿಗೆ ಸನ್ಮಾನವಲ್ಲ, ಹೋರಾಟದ ಪರಂಪರೆಗೆ ಪುನರ್ಜಾಗೃತಿ — ಜಾಣಗೆರೆಯವರ ೭೫ಕ್ಕೆ ಸಾಕ್ಷಿಯಾದ ಬೆಂಗಳೂರು ಬೆಂಗಳೂರು ೨೯: ಅದು ಕೇವಲ ೭೫ರ ಸಂಭ್ರಮವಾಗಿರಲಿಲ್ಲ.ತಲೆಮಾರಿನ ಹೋರಾಟದ ನೆನಪುಗಳನ್ನು ಮತ್ತೆ ಕೆದಕಿದ ದಿನ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದ ಹೋರಾಟಗಾರನ ಬದುಕಿಗೆ ಗೌರವ ಸಲ್ಲಿಸುವ ನೆಪದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾದ ಕಾಲ ಬಂದಿದೆ ಎಂಬ ಎಚ್ಚರಿಕೆಯೂ ಮೊಳಗಿದ ದಿನ. ಅದು ಜಾಣಗೆರೆ ವೆಂಕಟರಾಮಯ್ಯ ಅವರ ೭೫ರ ಸಂಭ್ರಮಕ್ಕೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಿಂದಲೇ…
ಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಸಭಾಪತಿ!
ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರು ಹಾಗೂ ಗಣ್ಯರು ಆಗಮಿಸಿದಾಗ, ತಮ್ಮ ಭಾಷಣ ಮುಗಿಸಿ ಮತ್ತೊಂದು ಕಾರ್ಯಕ್ರಮ ಅಥವಾ ತುರ್ತು ಕೆಲಸದ ನೆಪದಲ್ಲಿ ಕಾರ್ಯಕ್ರಮ ಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸುವುದು ಕಂಡುಬರುತ್ತದೆ. ಆದರೆ ‘ಜಾಣಗೆರೆ–75’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಇದಕ್ಕೆ ತದ್ವಿರುದ್ಧವಾದ ನಡೆ ತೋರುವ ಮೂಲಕ ಗಮನ ಸೆಳೆದರು.ಜಾಣಗೆರೆ ವೆಂಕಟರಾಮಯ್ಯ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿದ ಬಳಿಕ ಸಲೀಂ ಅಹ್ಮದ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಲಿದ್ದಾರೆ ಎಂದೇ ಅಲ್ಲಿದ್ದವರು ಭಾವಿಸಿದ್ದರು….
ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಣೆ
ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಣೆ – ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ -ರಾಹುಲ್ ಜಾರಕಿಹೊಳಿ ಕಾಕತಿ (ಬೆಳಗಾವಿ ): ವಿಶೇಷ ಚೇತನ ಮಕ್ಕಳಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಿ ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳ ಸಹಕಾರದಿಂದ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಾಯಕವಾಗುವ ವಿಶೇಷ ಚಿಟ್ಗಳನ್ನು ಬಡ ಸರಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ವಿತರಿಸುತ್ತಿರುವುದು ಉತ್ತಮ ಕೆಲಸವಾಗಿದ್ದು ಈ ಸೌಲಭ್ಯಗಳನ್ನು ಸರುಪಯೋಗಪಡಿಸಿಕೊಂಡು ಮಕ್ಕಳನ್ನು ಶೈಕ್ಷಣಿಕವಾಗಿ…
ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದಾರೆ: ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ
ಸ್ಥಳೀಯ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ ಬೆಟಗೇರಿ: ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ಅ.೨೮ರಂದು ನಡೆದ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ…
