
ಗರ್ಲಗುಂಜಿ ಜಿಲ್ಲಾ ಪಂಚಾಯತ್.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ಮಾನ್ಯ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಇದ್ದಲಹೊಂಡ ಗ್ರಾಮದ ರಸ್ತೆ ಪರಿಶೀಲನೆ ನಡೆಸಿದ ನಂತರ, ಮಾತನಾಡಿದ ಡಾ.ಅಂಜಲಿತಾಯಿಯವರು ದಿಗಂಬರ ಪಾಟೀಲ್ ಮಾಮನೀಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ನನ್ನ ಅವಧಿಯಲ್ಲಿಯೇ ರಸ್ತೆ ಮಂಜೂರಾಗಿ ಟೆಂಡರ್ ಕೂಡ ಮಾಡಲಾಗಿದೆ, ಆದರೆ ನೀತಿ ಸಂಹಿತೆಜಾರಿಯಾದ, ಕಾರಣ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಆದರೆ ಈಗ ಇದ್ದಲಹೊಂಡ ಗ್ರಾಮಸ್ಥರಿಗಾಗಿ ಸುಂದರವಾದ ರಸ್ತೆಯನ್ನು ಸಿದ್ಧಪಡಿಸಲಾಗಿದೆ ಎಂದರು.
‘ರಸ್ತೆಗಾಗಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದ ಮುಖಂಡರ ಹಳ್ಳಿಯ ರಸ್ತೆ ಮಾಡಿದ್ದು ತುಂಬಾ ಖುಷಿ ತಂದಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ರಾಜಕೀಯ ಆರೋಪ ಮಾಡಲಾಗುತ್ತಿದೆ, ನಾವು ಹೆಚ್ಚು ತಲೆಕೆಡಿಸಿಕೊಳ್ಳಬಾರದು. ನಾವು ಕೆಲಸ ಮಾಡುತ್ತಲೇ ಇರಬೇಕು.
ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದು,ಇನ್ನೂ ಕೂಡಾ ಮುಂದಿನ 6 ತಿಂಗಳವರೆಗೆ ನನ್ನ ಕಾಲಾವಧಿಯಲ್ಲಿ ಮಂಜೂರಾದ ಕೆಲಸಗಳೇ ಚಾಲ್ತಿಯಲ್ಲಿ ಇರುತ್ತವೆ ಎಂದು ಹೇಳಿದರು.


