ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿಧಾನಸಭಾ ಮತಕ್ಷೇತ್ರ MLC ಅನುದಾನದ ಅಡಿ 49 ಲಕ್ಷ ರೂ. ಯೋಜನೆಯ ವಿವಿಧ ಕಾಮಗಾರಿಗಳಿಗೆ ಬೆಳಗಾವಿ ವಿಧಾನ ಪರಿಷತ್ ಸದಸ್ಯರು ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜಾ ನೆರವೇರಿಸಿ ಮಾತನಾಡಿದರು.

ರಾಮದುರ್ಗ ಪಟ್ಟಣದ ಗಾಂಧಿ ನಗರದ ಬಸವೇಶ್ವರ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ,
ಅಂಜುಮನ್ ಪ್ರೌಢಶಾಲೆಯ ಮೊದಲನೇ ಮಹಡಿಯ ಕಾಮಗಾರಿಗೆ 10 ಲಕ್ಷ ರೂಪಾಯಿ,
ರಾಮದುರ್ಗ ತಾಲ್ಲೂಕಿನ ಸುನ್ನಾಳ ಪುನರ್ವಸತಿ ಕೇಂದ್ರದಲ್ಲಿ ಸೋಮಪ್ಪ ಸಿನ್ನಾಳ ಇವರ ಮನೆಯಿಂದ ಗುರನಗೌಡ ಪಾಟೀಲ ಇವರ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಾಣಕ್ಕೆ10 ಲಕ್ಷ ರೂಪಾಯಿ,
ರಾಮದುರ್ಗ ತಾಲೂಕಿನ ಅರೆಬೆಂಚ ತಾಂಡಾ ಗ್ರಾಮ ಪಾಂಡುರಂಗ ದೇವಸ್ಥಾನದ ಎದುರುಗಡೆ ಫ್ಲವರ್ಸ್ ನಿರ್ಮಾಣಕ್ಕೆ 9 ಲಕ್ಷ ರೂಪಾಯಿ, ರಾಮದುರ್ಗ ತಾಲೂಕಿನ ದುರ್ಗಾದೇವಿ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ,
ರಾಮದುರ್ಗ ತಾಲೂಕಿನ ಭಗೀರಥ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ, ಒಟ್ಟು 49 ಲಕ್ಷ ರೂಪಾಯಿ ಕಾಮಗಾರಿಗಳಿಗೆ ಚಾಲನೆ ನೀಡಿದರು.



