ದೂರು ನೀಡಿದ 48 ಗಂಟೆಯಲ್ಲಿ ಕಟಕೋಳ ಪೊಲೀಸರಿಂದ ಮನೆ ಕಳ್ಳತನ ಪ್ರಕರಣದ ಇಬ್ಬರೂ ಆರೋಪಿತರ ಬಂಧನ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ದಿಲ್ಶಾದ ಸೈದುಸಾಬ ನದಾಫ್ ಅವರ ಮನೆಯಲ್ಲಿ ಇದ್ದ ಬಂಗಾರದ ಕಳ್ಳತನದ ಸಂಬಂಧಿಸಿದಂತೆ ಕಟಕೋಳ ಪೊಲೀಸ್ ಠಾಣಾ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸುವುದರೊಂದಿಗೆ, ಕಳ್ಳತನವಾಗಿದ್ದ 21,02,560/- ಕಿಮ್ಮತ್ತಿನ 154.6ಗ್ರಾಂ ಬಂಗಾರದ ಆಭರಣ ಹಾಗೂ 11,250/- ಕಿಮ್ಮತ್ತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕಃ 05/05/2026 ರಂದು ದಿಲ್ಶಾದ ಸೈದುಸಾಬ ನದಾಫ್ ಇವಳು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ, ಮನೆಯ ಕಪಾಟದಲ್ಲಿದ್ದ 154.6 ಗ್ರಾಂ ಬಂಗಾರದ ಆಭರಣ, ಅಕಿ 21,02,560/- ಹಾಗೂ 11,250/-ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ಕಟಕೋಳ ಪೊಲೀಸ್ ಠಾಣಾ ಅಪರಾಧ ಸಂಖ್ಯೆ. 85/2026 ದೂರು
ನೀಡಿದ್ದು ಈ ಬಗ್ಗೆ ಕಲಂ: 305, 331(4) ಬಿ.ಎನ್.ಎಸ್-2023 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ವಿನಾಯಕ ಬಡಿಗೇರ, ಸಿಪಿಐ ರಾಮದುರ್ಗ ರವರ ನೇತೃತ್ವದಲ್ಲಿ ಕಟಕೋಳ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಕೊಣ್ಣೂರೆ, ನುರಿತ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಎಸ್ ಎಸ್ ವಜ್ರಮಟ್ಟಿ, ಎಂ ಸಿ ಮನ್ನಿಕೇರಿ, ಎಮ್ ಆರ್ ಲದ್ದಿ, ಎಸ್ ಎಫ್ ಭಾಂಗಿ, ವಿ ಆರ್ ಗಲಬಿ ತನಿಖಾ ಸಹಾಯಕರಾದ ಆರ್ ಬಿ ಗೋಕಾಕ, ಡಿ ಎಚ್ ನಧಾಫ & ಬಿ ಎಸ್ ಚುಂಚನೂರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ವಿನೋದ ಎ ಠಕ್ಕನ್ನವರ ಹಾಗೂ ಸಚೀನ ಪಾಟೀಲ ಇವರ ತಂಡವನ್ನು ರಚಿಸಿದ್ದು, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಎ-01 ಹಣಮಂತ ಯಲ್ಲಪ್ಪ ಮಾರಾಪೂರ, ವಯಸ್ಸುಃ 27 ವರ್ಷ ಸಾಃ ಕಮಲದಿನ್ನಿ ತಾಃ ಮೂಡಲಗಿ. ಎ-02 ಹಸೀನಾ ತಂದೆ ಅಪ್ಪಾಸಾಬ ನದಾಫ್, ಗಂಡ ಶರೀಫ್, ವಯಸ್ಸುಃ 24 ಸಾಃ ಹೊಸಕೋಟಿ ತಾಃ ರಾಮದುರ್ಗ ಹಾಲಿಃ ಕಮಲದಿನ್ನಿ ತಾಃ ಮೂಡಲಗಿ ಇವರನ್ನು ಬಂದಿಸಿ ಕಳ್ಳತನಕ್ಕೆ ಸಂಬಂಧಿಸಿದಂತೆ, 32 ಗ್ರಾಂ ರಾಣಿ ಸರ ಅ.ಕಿ =435200/- ರೂ , 39 ಗ್ರಾಂ ತಾಳಿ ಚೈನ್ ಅ.ಕಿ =530400/- ರೂ, 34 ಗ್ರಾಂ ಅವಲಕ್ಕಿ ಸರ ಅ.ಕಿ=462400/-ರೂ , 32 ಗ್ರಾಂ ಬಳೆ ನಾಲ್ಕು ಅ.ಕಿ =435200/- ರೂ,
4.5 ಗ್ರಾಂ ಚೈನ ಒಂದು ಅ.ಕಿ=61200/-ರೂ, 6.5 ಗ್ರಾಂ ಚೈನ ಲಾಕೇಟ ಅ.ಕಿ=88400/-ರೂ, 3.5 ಗ್ರಾಂ ಹರಳಿನ ಜುಮಕಿ ಅ.ಕಿ=47600/-ರೂ, 1.3 ಗ್ರಾಂ ಕಿವಿಯ ರಿಂಗ್ ಅ.ಕಿ 17680/- ರೂ, 1.8 ಗ್ರಾಂ ಚಿಕ್ಕ ಮಕ್ಕಳ 4 ಉಂಗುರ ಅ.ಕಿ=24480/-ರೂ, 35 ಗ್ರಾಂ ಬೆಳ್ಳಿ ಪೆಂಡದ ಗೆಜ್ಜಿ ಅ.ಕಿ=8750/-ರೂ, 10 ಗ್ರಾಂ ಬೆಳ್ಳಿ ಸುತ್ತು ಉಂಗುರ ಅ.ಕಿ=2500/-ರೂ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ನಂ :ಕೆಎ-49/ ಎಕ್ಸ್ -2878 ಒಟ್ಟು 21,02,560/- ಕಿಮ್ಮತಿನ 154.6 ಗ್ರಾಂ ಬಂಗಾರದ ಆಭರಣ, ಹಾಗೂ 11,250/- ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಆರೋಪಿತರಿಂದ ಕಡೆಯಿಂದ ಕಟಕೋಳ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.



