ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ, ಹಲಾಲ್ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಭೀಕರ ದಂಧೆಯೊಂದನ್ನು ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ! ಈ ಅಮಾನವೀಯ ಕೃತ್ಯ ಎಸಗುತ್ತಿದ್ದ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿ, ಆತನ ಬಳಿಯಿದ್ದ ನವಿಲಿನ ಮಾಂಸ ಹಾಗೂ ಮೊಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಈ ಕರಾಳ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಸಾದೀಕ್ ಪಾಷ ಬಂಧಿತ ಆರೋಪಿ. ಈತ ಕಾಡಿನಿಂದ ನವಿಲುಗಳನ್ನು ಸೆರೆಹಿಡಿದು ತಂದು, ಅವುಗಳನ್ನು ಹಲಾಲ್ ಮಾಡಿ ಮಾಂಸವನ್ನು ದುಬಾರಿ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ತೋಟದ ಮನೆಗೆ ಹಠಾತ್ ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ದಾಳಿ ವೇಳೆ 3 ಕೆ.ಜಿ. ಹಸಿ ನವಿಲಿನ ಮಾಂಸ ಸಿಕ್ಕಿದ್ದು ನವಿಲಿನ ಮೂಳೆಗಳು ಮತ್ತು ಗರಿಗಳು
ನವಿಲಿನ ಅಪರೂಪದ ಮೊಟ್ಟೆಗಳು ವಶಪಡಿಸಿಕೊಂಡಿದ್ದಾರೆ
ಅದೃಷ್ಟವಶಾತ್ ಸಾವು ಗೆದ್ದು ಬದುಕಿದ್ದ ಒಂದು ಜೀವಂತ ನವಿಲನ್ನು ಅಧಿಕಾರಿಗಳು ಆತನ ಕಮ್ಯುನಿಟಿಯಿಂದ ರಕ್ಷಿಸಿದ್ದಾರೆ!
ರಾಷ್ಟ್ರಪಕ್ಷಿ ನವಿಲನ್ನು ಕೊಲ್ಲುವುದು ಅಥವಾ ಅದರ ಮಾಂಸ, ಗರಿಗಳನ್ನು ಹೊಂದುವುದು ಕಾನೂನುಬದ್ಧವಾಗಿ ಗಂಭೀರ ಅಪರಾಧವಾಗಿದೆ. ಸದ್ಯ ಬಂಧಿತ ಆರೋಪಿ ಸಾದೀಕ್ ಪಾಷ ವಿರುದ್ಧ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಜಾಮೀನು ರಹಿತ ಕಠಿಣ ಪ್ರಕರಣ ದಾಖಲಿಸಲಾಗಿದೆ.
ಅರಣ್ಯ ಸಂಚಾರಿ ದಳದ ಈ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಪ್ರಾಣಿ ಪ್ರೇಮಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.



