ಸವದತ್ತಿ, ತಾಲೂಕಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ತಾಲೂಕಾ ನ್ಯಾಯಾಲಯ, ವಕೀಲರ ಸಂಘ, ತಾಲೂಕಾ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡುವುದರ ಜೋತೆಗೆ ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಶ್ರೀ. ಶಶಿಧರ ಎಮ್. ಗೌಡ ರವರು ದ್ವಜಾರೋಹನ ನೇರವೇರಿಸಿದರು ನಂತರ ನೇರದಿರುವ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿದರು.
ದ್ವಜಾರೋಹನದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ, ಉಪಾಧ್ಯಕ್ಷರಾದ ಎಮ್.ಎಸ್. ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ ಹಾಗೂ ಹಿರಿಯ ನ್ಯಾಯವಾದಿಗಳಾದ ಬಿ.ಎಮ್.ಯಲಿಗಾರ, ಎಮ್.ಬಿ.ದ್ಯಾಮನಗೌಡರ, ಎಸ್.ಎಚ್.ಜಾಲಿಕೊಪ್ಫ ಸಿ.ಬಿ.ದೊಡಗೌಡರ, ಎಸ್.ಆರ್.ಪಾಟೀಲ, ವಿ.ವಿ.ಹಿರೇಮಠ, ಸಿ.ಜಿ.ತುರಮರಿ, ಎಸ್.ಬಿ.ಹೂಲಿಕಟ್ಟಿ ಹಾಗೂ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ಮತ್ತು ನ್ಯಾಯಾಲಯದ ಸಿಬ್ಬಂಧಿಯವರು, ತಾಲೂಕಾ ಕಾನೂನು ಸೇವಾ ಸಮಿತಿಯ ಸಿಬ್ಬಂದಿಯವರು, ಪೋಲೀಸ್ ಸಿಬ್ಬಂಧಿಯವರು ಮುಂತಾದವರು ಹಾಜರಿದ್ದರು.