ಕೋಲಾರಮ್ಮನ ದರ್ಶನ ಪಡೆದ ಮಹಿಳಾ ಆಯೋಗ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ
ಕೋಲಾರ: ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವರ ರೀತಿ ದಿಟ್ಟ ಹೋರಾಟಗಾರತಿಯರಾದ ಜಿಲ್ಲೆಯ ಮಹಿಳೆಯರು ನಾಡಿನ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅಭಿಪ್ರಾಯಪಟ್ಟರು.ಬುಧವಾರ ನಗರಕ್ಕೆ ಭೇಟಿ ನೀಡಿ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿಗಾಗಿ ಹೋರಾಡಿದ ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಂಬಾಡಿ ಮಲ್ಲಮ್ಮ ಹಾಗೂ ಅಬ್ಬಕ್ಕದೇವಿಯರನ್ನು ಚಿನ್ನದ ನಾಡು ಕೋಲಾರದಲ್ಲಿ ಕಂಡು ಅತೀವ ಸಂತೋಷವಾಗಿದೆ ಎಂದು ಕೊಂಡಾಡಿದರು.ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ…
