
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಸ್ವಚ್ಛತೆಯೇ ಸೇವೆ ಅಂಚೆ ಸಪ್ತಾಹ ಅಂಗವಾಗಿ ರಾಮದುರ್ಗ ಪ್ರಧಾನ ಅಂಚೆ ಕಚೇರಿ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿಯಿಂದ ಪ್ರಭಾತ ಪೇರಿಯೊಂದಿಗೆ ಪಟ್ಟಣದ ವಿವಿಧ ಮಾರ್ಗವಾಗಿ ಸ್ವಚ್ಛ ಭಾರತ ಅಭಿಯಾನ ಬ್ಯಾನರ ಹಿಡಿದು ಜನರಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಾದರು.
ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆ ಅಡಿಯಲ್ಲಿ ಹಸಿರೇ ಉಸಿರು, ಸ್ವಚ್ಛ ಭಾರತ ಆರೋಗ್ಯಕರ ಭಾರತ, ಸ್ವಚ್ಛ ಭಾರತ ಹಸಿರು ಭಾರತ, ಸ್ವಚ್ಛ ಮತ್ತು ಹಸಿರು ಭಾರತದ ಪರಿಪೂರ್ಣ ಕನಸು, ಸೌಚಾಲಯ ಬಳಸಿ ಪರಿಸರ ಉಳಿಸಿ ಎಂಬ ವಿವಿಧ ಘೋಷಣೆಯೊಂದಿಗೆ ಪ್ರಭಾತ ಪೇರಿ ಯಶಶ್ವಿಯಾಗಿ ನಡೆಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಅಂಚೆ ವಿಭಾಗದ ಅಂಚೆ ಅಧಿಕ್ಷಕ ವಿಜಯ ವಾದೋನಿ, ರಾಮದುರ್ಗ ಅಂಚೆ ನೀರಿಕ್ಷಕ ನಾಗರಾಜ ಮಳ್ಳಿ, ಪ್ರಧಾನ ಅಂಚೆ ಕಚೇರಿಯ ಪೋಸ್ಟ ಮಾಸ್ಟರ್ ದಾವಲ ಅಣ್ಣಿಗೇರಿ, ಐಪಿಪಿಬಿ ಬೆಳಗಾವಿ ಮ್ಯಾನೇಜರ್ ಸುರೇಶ ಮದ್ದೇಲಾ, ನೇಕಾರಪೇಠ ಅಂಚೆ ಪಾಲಕ ಮಹಾಂತೇಶ ಹೊಸಮನಿ, ಎಸ್ಪಿಸಿಓ ಅರುಣ ಮನ್ನೆಪ್ಪಗೋಳ ಹಾಗೂ ರಾಮದುರ್ಗ, ಸವದತ್ತಿ ವ್ಯಾಪ್ತಿಯ ಎಲ್ಲ ಪೋಸ್ಟ ಮ್ಯಾನ ಹಾಗೂ ಶಾಖಾ ಅಂಚೆ ಸಿಬ್ಬಂದಿಯವರು ಭಾಗವಹಿಸಿದ್ದರು.


