ಕೇಂದ್ರ ಕಛೇರಿ ದೆಹಲಿ ಸುತ್ತೋಲೆ ಮೇರೆಗೆ ಬಿಜೆ ಸುಂದರೇಶ್ ನೇತೃತ್ವದಲ್ಲಿ ಭಾರತೀಯ ಅಂಚೆ ನೌಕರರಿಂದ ನಗರದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ 5:45 ಸಮಯದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಂತಹ ಬಿಜೆ ಸುಂದರೇಶ್ ರವರು ಪ್ರತಿಭಟನೆಯ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಿ 8 ವೇತನ ಆಯೋಗದ ರಚನೆ ಸೇರಿದಂತೆ 42 ಹಳೆಯ ಬೇಡಿಕೆಗಳನ್ನು ಹಿಡೇರಿಸಬೇಂಕೆದು ಸಾರ್ವಜನಿಕ ಸಂಪರ್ಕ ಅಂಚೆ ಅಧಿಕಾರಿ ಮತ್ತು ಅಖಿಲ ಭಾರತ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷರು ಆದಂತಹ ಬಿಜೆ ಸುಂದರೇಶ್ ರವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯ ಸಂದರ್ಭದಲ್ಲಿ ಮೂರು ಸಂಘಟನೆಯ ಎಲ್ಲಾ ಸದಸ್ಯರು ಪ್ರತಿಭಟನೆಯಲ್ಲಿ ಉಪಸ್ಥಿತಿಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಯಾಗಿ ಪರಿಣಮಿಸಿದರು. ಈ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದಂತಹ ಕೆಆರ್ ನಾಗರಾಜ್. ಸದಸ್ಯರಾದ ಹಿಮಂತರಾಜ.ಎಸ್.ಜೆ. ಬಿಕೆ ರವಿಕುಮಾರ್. ಅಂಚೆ ಸಹಾಯಕರಾದ ಎ ಸುರೇಶ್. ಕರಿಬಸವ. ಉಪ ಅಂಚೆಪಾಲಕರಾದ ಅಬ್ದುಲ್ ಅಜಿಜ್. ಕಾರ್ಯದರ್ಶಿಯಾದ ಸಂತೋಷ. ಉಪಸ್ಥಿತಿಯಲ್ಲಿ ಭಾಗವಹಿಸಿದರು. ಈ ಪ್ರತಿಭಟನೆಯು ಶಿವಮೊಗ್ಗ ನಗರದ ಅಂಚೆ ಅಧೀಕ್ಷಕರ ಕಾರ್ಯಾಲಯ ದಲ್ಲಿ ಯಶಸ್ವಿಯಾಗಿ ನಡೆಯಿತು.
ವರದಿ : ಹೇಮಂತ್ ರಾಜ್ ಶಿವಮೊಗ್ಗ
ಭಾರತೀಯ ಅಂಚೆ ನೌಕರರಿಂದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಅಹೋರಾತ್ರಿ ಪ್ರತಿಭಟನೆ

WhatsApp Group
Join Now


