ನ್ಯಾಯಾಲಯ ಸಂಕೀರ್ಣದ ಮುಂದೆ ಸ್ಪೀಡ್ ಬ್ರೇಕರ್ ಹಾಕಬೇಕೆಂದು ಸಮಾಜಸೇವಕರಾದ ಪ್ರಶಾಂತ ಅಂಗಡಿ ಅವರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ದೊಡಮಂಗಡಿ ಗ್ರಾಮದಲ್ಲಿ ಇದ್ದಂತ ನ್ಯಾಯಾಲಯ ಸಂಕೀರ್ಣದ ಮುಂದೆ ಇರುವ ರಾಮದುರ್ಗ ಹಾಗೂ ಮುಳ್ಳೂರು ಮೇನ್ ರೋಡ್ ರಾಜ್ಯ ಹೆದ್ದಾರಿ 34 ಔರಾದ ಸದಾಶಿವಗಡ ರಸ್ತೆ ಬದಿಗೆ ನ್ಯಾಯಾಲಯಗಳು ಇರುವುದರಿಂದ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ನ್ಯಾಯವಾದಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ. ವಾಹನಗಳು ಬಹಳ ವೇಗವಾಗಿ ಚಲಿಸುತ್ತಿರುವುದರಿಂದ ಭಯದ ವಾತಾವರಣ ಉಂಟಾಗಿದೆ. ಆದ್ದರಿಂದ ಸ್ಪೀಡ್ಬ್ರೇಕರ್ಗಳನ್ನು ನಿರ್ಮಾಣ ಮಾಡಬೇಕು. ಸ್ಪೀಡ್ ಲಿಮಿಟ್ ಬೋರ್ಡ್ ಹಾಕಬೇಕು ರಸ್ತೆಯ ನಿರ್ದಿಷ್ಟ ಭಾಗದಲ್ಲಿ ವಾಹನಗಳ ವೇಗವನ್ನು ಸುರಕ್ಷಿತವಾಗಿ ಕಡಿಮೆ ಮಾಡಲು ಹಾಗೂ ಅಪಘಾತಗಳನ್ನು ತಡೆಗಟ್ಟಲು ಸ್ಪೀಡ್ ಬ್ರೇಕರ್ ಹಾಕಿ ಅವುಗಳ ಮೇಲೆ ಬಿಳಿ ಪಟ್ಟಿಗಳನ್ನು ಚಿತ್ರಿಸುವಂತೆ ಹಾಕಬೇಕೆಂದು ಸಮಾಜಸೇವಕರಾದ ಪ್ರಶಾಂತ ಅಂಗಡಿ ಅವರು ಸಹಾಯಕಕಾರ್ಯನಿರ್ವಾಹಕ
ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪವಿಭಾಗ ರಾಮದುರ್ಗ ಇವರಿಗೆ ಮನವಿ ಸಲ್ಲಿಸಿದರು

About The Author