WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ರಾಧಾಪೂರ ಪೇಟೆಯಲ್ಲಿ ಶ್ರೀ ದೇವರ ದಾಸಿಮಯ್ಯ ನವರ ವೃತ್ತದ ಹತ್ತಿರ ಎಚ್.ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಧ್ವಜದ ಕಟ್ಟಿಯನ್ನು ಬೆಳಗಾವಿಯ ಬಿ.ಡಿ.ಸಿ.ಸಿ ಬ್ಯಾಂಕಿನ ನೂತನ ನಿರ್ದೇಶಕರಾದ ಮಲ್ಲಣ್ಣ ಯಾದವಾಡ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ಪುರಸಭೆಯ ಮಾಜಿ ಅಧ್ಯಕ್ಷರಾದ ಅಶೋಕ ಸುಳಿಭಾವಿ, ಪುರಸಭೆಯ ಸದಸ್ಯರಾದ ಪ್ರಹ್ಲಾದ ಬಡಿಗೇರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ವಿನಯ ಚಂದರಗಿ, ಉಪಾಧ್ಯಕ್ಷರುಗಳಾದ ಅಂಬರೀಶ್ ಬಟಕುರ್ಕಿ, ವೆಂಕಣ್ಣ ನಂದಗಾವಿ, ಸಂಗಮೇಶ ನರನೂರ ಕಾರ್ಯಧ್ಯಕ್ಷರಾದ ಸುಹಾಸ್ ಬಾರಕಿ, ಕಾರ್ಯದರ್ಶಿ ಚಿರು ಮುದಕವಿ, ಮಹಾಂತೇಶ ಲಮಾಣಿ, ಬೈಲಪ್ಪ ಜಂಜಲಿ, ಸುಭಾಸ್ ಹಿರಗನ್ನವರ ಹಾಗೂ ಕಾರ್ಯಕರ್ತರು ನೇಕಾರ ಪೇಟೆಯ ಸಮಸ್ತ ಹಿರಿಯರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು



