ಹುಬ್ಬಳ್ಳಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ದರೋಡೆಕೋರರು
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ದರೋಡೆ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿ ಪಂಚನಾಮೆ ನಡೆಸುವಂತ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ದರೊಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಭರತ್,ಹಾಗೂ ಪಾರೂಕ್ ಎಂಬಾತರೇ ಗುಂಡೇಟು ತಿಂದ ನಟೋರಿಯಸ್ ದರೊಡೆಕೋರರಾಗಿದ್ದರೆ ಕಳೆದ ಅಕ್ಟೋಬರ್ 24 ರಂದು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇಶನ್ ಬಳಿಯ ಬೋಗಿ ಬೋಗಿ ರೆಸ್ಟೋರೆಂಟ್ ಬಳಿ ಈ ಗ್ಯಾಂಗ್…
