ಅನ್ಯಾಯ ಪ್ರಶ್ನಿಸಿದ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ..!
ಬೆಂಗಳೂರು: ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,ಅದನ್ನು ಪ್ರಶ್ನಿಸಲೇಬೇಡಿ..? ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ ಎಷ್ಟೇ ಕಾನೂನು ತಿಳ್ಕೊಂಡಿರ್ರಿ. ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು ಪ್ರಶ್ನಿಸುವ ಗೋಜಿಗೆ ಹೋಗಲೇಬೇಡಿ. ಹೋದರೆ ಏನಾಗುತ್ತೆ ಗೊತ್ತಾ..? ಇದಕ್ಕೆ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ.ಸುನೀಲ್ ಹೆಬ್ಬಿ ಅವರಿಗಾದ ಸ್ಥಿತಿಯೇ ಜೀವಂತ ಸಾಕ್ಷಿಯಂತಿದೆ ಅಷ್ಟಕ್ಕೂ ಸುನೀಲ್ ಹೆಬ್ಬಿ ಮಾಡಿದ ತಪ್ಪೇನು ಗೊತ್ತಾ..? ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲವರು ನಡೆಸುತ್ತಿದ್ದರೆನ್ನಲಾದ ಅಕ್ರಮ ಪ್ರಶ್ನಿಸಿದ್ದು ಅಷ್ಟೇ ಆ ಅಕ್ರಮಕ್ಕೆ ಬಲಿಪಶುಗಳಾಗುತ್ತಿದ್ದ ನಾಗರಿಕರನ್ನು…
