ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಂಜುನಾಥ್ ಮೆಡಿಕಲ್ ಮುಂದೆ ಇರುವ ದಿವೈಡರ್ ಮಧ್ಯದಲ್ಲಿ ಬೀದಿ ದೀಪದ ವಿದ್ಯುತ್ ಕಂಬಕ್ಕೆ ಬಸ್ ಟಚ್ ಆಗಿದ್ದು ಬಸಿನ ಬಲಭಾಗದಲ್ಲಿ ಇರತಕ್ಕಂತಹ ತಗೂಡು ಸಂಪೂರ್ಣ ಜಕ್ಕನಗೊಂಡಿದೆ. ಸದ್ಯಕ್ಕೆ ಯಾರಿಗೂ ಏನು ಅಪಾಯವಾಗಿಲ್ಲ.
ಪಟ್ಟಣದಲ್ಲಿ ವನವೇ ರಸ್ತೆ ಇದ್ದರೂ ಕೂಡ ವಾಹನ ಸವಾರರು ನಿಯಮಗಳನ್ನು ಪಾಲಿಸದೆ ತಮಗೆ ಇಷ್ಟ ಬಂದ ಹಾಗೆ ರಸ್ತೆಯ ಮೇಲೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ಇತರ ಘಟನೆ ನಡೆದಿದೆ. ಪೊಲೀಸರು ರಸ್ತೆಯ ಮೇಲೆ ವಾಹನ ನಿಲ್ಲದ ಹಾಗೆ ನೋಡಿಕೊಂಡರೆ ಯಾವುದೇ ಅನಾಹುತಗಳು ನಡೆಯುವದಿಲ್ಲವೆಂದು ಸಾರ್ವಜನಿಕರು ಆರೋಪಿಸಿದರು.

ದಿವೈಡರ್ ಆಗಲಿ ಬೀದಿ ದೀಪದ ಕಂಬವಾಗಲಿ ವಾಹನ ಸವಾರರಿಗೆ ತೊಂದರೆಯಾಗದಂತೆ ಲೋಕೋಪಯೋಗಿ ಇಲಾಖೆ, ಪುರಸಭೆಗೆ, ಹಾಗೂ ರಾಮದುರ್ಗ ಶಾಸಕರಿಗೆ ಇದರ ಬಗ್ಗೆ ನಮ್ಮ ಸಂಚಾರಿ ಸತ್ಯ ಪತ್ರಿಕೆ ವರದಿಗಾರರಾದ ಪ್ರಶಾಂತ್ ಅಂಗಡಿ ಅವರು ಸಾಕಷ್ಟು ಬಾರಿ ಡಿವೈಡರ ಬಗ್ಗೆ ಗಮನಕ್ಕೆ ತಂದರು ಕೂಡ ಇದುವರೆಗೂ ಕ್ಯಾರೆ ಅನ್ನದೆ ಅಧಿಕಾರಿಗಳು ಸುಮ್ಮನಿದ್ದಾರೆ.



