ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಶೇರುದಾರರಿಗೆ ಆ.1 ರಿಂದ 15 ರವರೆಗೆ ರಿಯಾತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುವದು ಎಂದು ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.
ರಾಮದುರ್ಗ ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಸ್ಟ್ 1 ರಿಂದ 15 ರವರೆಗೆ ರಿಯಾತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುವುದು ಅ ವರ್ಗದ ಶೇರುದಾರರಿಗೆ ರೂ.2200 ದರದಲ್ಲಿ ಒಂದು ಕ್ವಿಂಟಲ್, ಡ ವರ್ಗದ ಶೇರುದಾರರಿಗೆ ರೂ. 1100ದರದಲ್ಲಿ 50 ಕೆಜಿ ಸಕ್ಕರೆ ವಿತರಣೆ ಮಾಡಲಾಗುತ್ತಿದೆ. ರವಿವಾರ ಹೊರತು ಪಡಿಸಿ, ಪ್ರತಿದಿನ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಕಾರ್ಖಾನೆ ಆವಣದಲ್ಲಿ ಸಕ್ಕರೆ ವಿತರಿಸಲಾಗುತ್ತಿದ್ದು, ಶಾಂತಯುತವಾಗಿ ಸಕ್ಕರೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶೇರುದಾರ ಸದಸ್ಯರು ಮರಣ…
