70ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ವಿನಯ ಚಂದರಗಿ ನೆರವೇರಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ರಾಧಾಪೂರ ಪೇಟೆಯಲ್ಲಿ ಶ್ರೀ ದೇವರ ದಾಸಿಮಯ್ಯ ನವರ ವೃತ್ತದ ಹತ್ತಿರ ಎಚ್.ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ವಿನಯ ಚಂದರಗಿ ನೆರವೇರಿಸಿ,ಬೈಕ್ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೊಳ್ಳಿ ರಾಯಣ್ಣನಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುನೀತಾ ತಿಮ್ಮನಗೌಡ್ರ, ಅನು ಬಸನಗೌಡ್ರವೈಶಾಲಿ ಬಟಕುರ್ಕಿ, ಕಾರ್ಯಾಧ್ಯಕ್ಷ ಸುಹಾಸ ಬಾರಕಿ, ಉಪಾಧ್ಯಕ್ಷರಾದ ಅಂಬರೀಷ ಬಟಕುರ್ಕಿ, ಪ್ರಶಾಂತ್ ಅಂಗಡಿ, ವೆಂಕಣ್ಣ ನಂದಗಾವಿ,ಸಂಗಮೇಶ ನರನೂರ,ಕಾರ್ಯದರ್ಶಿ…
