ಶಿರಸಂಗಿ ವಿವಿಧ್ದೂದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರಾಗಿ ಅವಿರೂಧವಾಗಿ ಆಯ್ಕೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶಿರಸಂಗಿ ವಿವಿಧ್ದೂದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಗಾರ ಮತಕ್ಷೇತ್ರದಿಂದ ಆಯ್ಕೆಯಾದ ಕಲ್ಲನಗೌಡ ಬಸನಗೌಡ ಪಾಟೀಲ. ನಾಗಪ್ಪ ಬಸಪ್ಪ ಹೂಲಿ ಬಸಯ್ಯಾ ಚಂದ್ರಯ್ಯಾ ಶಿರಕೋಳಮಠ, ಮಲ್ಲಿಕಾರ್ಜುನ ಹನುಮಂತಪ್ಪ ಪೂಜಾರ, ಮಹಾಂತೇಶ ಶಿದ್ದಪ್ಪ ಪಂಚೆನವರ ಮತ್ತು ಸಾಮಾನ್ಯ ಸಾಲಗಾರರ ಮಹಿಳಾ ಮತ ಕ್ಷೇತ್ರದಿಂದ ಶ್ರೀಮತಿ ಮಹಾದೇವಿ ನೀಲಪ್ಪ ಬೆನಕಟ್ಟಿ, ಮತ್ತು ಶ್ರೀಮತಿ ಸುಮಿತ್ರಾ ಮಲ್ಲಿಕಾರ್ಜುನ ಗೊರವನಕೊಳ್ಳ, ಹಾಗೂ ಸಾಮಾನ್ಯ ಸಾಲಗಾರರ ಹಿಂದುಳಿದ ಅ ವರ್ಗ ಕ್ಕೆ ಶ್ರೀ ಕಲ್ಲಪ್ಪ ಗದಿಗೆಪ್ಪ ಕಣವಿ, ಮತ್ತು ಸಾಮಾನ್ಯ ಸಾಲಗಾರರ ಹಿಂದುಳಿದ ಬ ವರ್ಗಕ್ಕೆ ಶ್ರೀ ಶಿವಾನಂದ ಶಿ ಹರ್ಲಾಪೂರ ಮತ್ತು ಸಾಮಾನ್ಯ ಸಾಲಗಾರರ ಪರಿಶಿಷ್ಟ ಪಂಗಡದಿಂದ ಶ್ರೀ ರಾಮಚಂದ್ರ ಗದಿಗೆಪ್ಪ ಪರ್ಶಿ, ಮತ್ತು ಸಾಮಾನ್ಯ ಸಾಲಗಾರರ ಪರಿಶಿಷ್ಟ ಜಾತಿಯ ಕ್ಷೇತ್ರದಿಂದ ಶ್ರೀ ಲಕ್ಷö್ಮಣ ಮಹಾದೇವಪ್ಪ ಭಜಂತ್ರಿ ಮತ್ತು ಬಿನ್ ಸಾಲಗಾರ (ಸಾಲೇತರ) ಕ್ಷೇತ್ರದಿಂದ ಶ್ರೀ ಬಸಪ್ಪ ಸಹದೇವಪ್ಪ ಇದ್ಲಿ ಇವರು ಸಂಘದ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ದಿನಾಂಕ 03-01-2025 ರಂದು ಸಂಘದ ಆಡಳಿತ ಮಂಡಳಿಗೆ ಅವಿರೂಧವಾಗಿ ಅಧ್ಯಕ್ಷರಾಗಿ ಶ್ರೀ ಮಹಾಂತೇಶ ಶಿದ್ದಪ್ಪ ಪಂಚೆನ್ನವರ ಆಯ್ಕೆಯಾಗಿದ್ದಾರೆ. ಮತ್ತು ಉಪಾಧ್ಯಕ್ಷರಾಗಿ ಶ್ರೀ ಶಿವಾನಂದ ಶಿವಲಿಂಗಪ್ಪ ಹರ್ಲಾಪೂರ ನೂತನವಾಗಿ ಆಯ್ಕೆಯಾಗಿದ್ದಾರೆ
ನೂತನವಾಗಿ ಶಿರಸಂಗಿ ವಿವಿಧ್ದೂದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಉಳಿದ ನಿರ್ದೇಶಕರು ಸಂಘದ ಸರ್ವತೋಮುಖ ಅಬಿವೃದ್ದಿಗೆ ಶ್ರಮಿಸಬೇಕು ಮತ್ತು ಸಹಕಾರಿ ಸಂಘದಿಂದ ಸರಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಘದ ಅಭಿವೃದ್ದಿಗೆ ಶ್ರಮಿಸಬೇಕೆಂದು ಸರ್ವ ಸದಸ್ಯರು ಶುಭಕೋರಿದ್ದಾರೆ.
