ತನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಮಗನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ!?

WhatsApp Group Join Now

ಇದರಲ್ಲಿರುವವರು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಬಂದ ಅವರಿಗೆ ಫೋನಿನಲ್ಲಿ ಇನ್ನೊಂದು ಕಡೆಯಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ. ಆ ಪರಮಕೊಳಕ ಕ್ರಿಮಿನಲ್ ಯಾರೆಂದು ನಿಮಗೆ ಗೊತ್ತೇ?

ಅಂದಹಾಗೆ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಮತ್ತು ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಈ ತರಹದ ಘಟನೆಗಳು ನಡೆಯುತ್ತಿರುತ್ತವೆ. ಒಮ್ಮೆ ಬಹುಸಂಖ್ಯಾತ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರೆ ಪೋಕರಿಗಳೆಲ್ಲ ತಮ್ಮ ಬಿಲ ಸೇರುತ್ತಾರೆ. ಇಲ್ಲವಾದರೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರು ಈ ತರಹ ದಾಳಿಗೆ ಒಳಗಾಗುತ್ತಾರೆ ಮತ್ತು ಮಿಕ್ಕ ಭ್ರಷ್ಟ ಅಧಿಕಾರಿಗಳು ಭ್ರಷ್ಟರ ಮನೆಯ ಕಕ್ಕಸುಗುಂಡಿ ತೊಳೆಯುತ್ತಾರೆ.

ಈ ಕೂಡಲೇ ಸರ್ಕಾರ ಈ ಅಧಿಕಾರಿಗೆ ರಕ್ಷಣೆ ಕೊಡಬೇಕು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ Suo Moto ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ ನೀಚನ ಮೇಲೆ ಕ್ರಮ ಜರುಗಿಸಬೇಕು.

ರಾಜ್ಯದಾದ್ಯಂತ ಇರುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಈ ಮಹಿಳಾ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು.

ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರು ಈ ಕೂಡಲೇ ಈ ಅಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕು ಮತ್ತು ಅವರು ಪೊಲೀಸರಿಗೆ ದೂರು ನೀಡಲು ಒತ್ತಾಯಿಸಬೇಕು ಎಂದು ಈ ಮೂಲಕ ನಾನು ಸೂಚಿಸುತಿದ್ದೇನೆ.

– ರವಿ ಕೃಷ್ಣಾರೆಡ್ಡಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

About The Author