13 August 2026
Advertisement
ರಾಜ್ಯ

ಹಾಸನ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ( ಡಿಡಿಪಿಐ) H.k ಪಾಂಡು ಲೋಕಾಯುಕ್ತ ರಿಂದ ಬಂಧನ ಮತ್ತು ಕರ್ತವ್ಯದಿಂದ ಅಮಾನತ್ತು .

WhatsApp Group Join Now

ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾ..ಳಿ, ಶಿಕ್ಷಕಿ ವರ್ಗಾವಣೆಗೆ ಲಂಚ ಸ್ವೀಕರಿಸುತ್ತಿದ್ದ ಡಿಡಿಪಿಐ ಎಸ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್‌ರಾವ್ 40 ಸಾವಿರ ರೂ. ಲಂಚದ ಹಣದ ಸಹಿತ ಬಲೆಗೆ.

ಡಿಡಿಪಿಐ ಪಾಂಡು ಅವರು ಎ.ಎಸ್. ವೇಣುಗೋಪಾಲ್‌ರಾವ್ ಮೂಲಕ ಶಿಕ್ಷಕಿಯ ವರ್ಗಾವಣೆಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದು. ಈ ಸಂಬಂಧ ಶಿಕ್ಷಕಿಯ ಪತಿ ಅಭಿಜಿತ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು.

ದೂರು ಆಧರಿಸಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದ ತಂಡ ಖಚಿತ ದಾ..ಳಿ ನಡೆಸಿ, 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಪಾಂಡು ಹಾಗೂ ವೇಣುಗೋಪಾಲ್‌ರಾವ್ ಅವರನ್ನು ಹಣದ ಸಮೇತ ವಶಕ್ಕೆಪಡೆದಿದು ಎಡೆಮುರಿಕಟ್ಟಿದ್ದಾರೆ.

About The Author