ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆಯ ಅಂಗವಾಗಿ ದುಂಡು ಮೇಜಿನ ಸಭೆ
ರಾಮದುರ್ಗ ಭಾರತ ದೇಶ ಜಾತ್ಯಾತೀತ ದೇಶ. ಇಲ್ಲಿ ಎಲ್ಲ ಸಮಾಜದವರು ಕೂಡಿ ಬಾಳಿದಂತಹ ದೇಶ. ಈ ದೇಶದಲ್ಲಿ ಇವತ್ತು ಜಾತಿ ಆಧಾರದಲ್ಲಿ ನಮ್ಮನ್ನು ಒಡೆಯುವ ಜಾತಿವಾದಿಗಳು ಕುತಂತ್ರ ಮಾಡುತ್ತಿದ್ದಾರೆ. ಇದನ್ನು ತಡೆಯಲು ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾಗಬೇಕೆಂದು ಸಾನಿಧ್ಯ ವಹಿಸಿದ ಶ್ರೀ.ಮ.ನಿ.ಪ್ರ ಶಾಂತವೀರ ಸ್ವಾಮಿಗಳು ಶೀವಮೂರ್ತೇಶ್ವರ ಮಠ ರಾಮದುರ್ಗ ಇವರು ಕಾರ್ಮಿಕ ಕಚೇರಿಯಲ್ಲಿ ನಡೆದ ಇನ್ಸಾಫ್ ಕಮಿಟಿ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ನಡೆದಿರುವ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು….
