ಓಬಳಾಪೂರ ಗ್ರಾ.ಪಂ ಅಧಿನದ ಜಾಗದಲ್ಲಿ ರಾಷ್ಟ್ರಧ್ವಜದ ಕಂಬದ ಮುಂದೆಯೇ ಅಕ್ರವಾಗಿ ಕಟ್ಟಿದ ಅಂಗಡಿ ಕಟ್ಟಡವನ್ನು ತೆರವುಗೊಳಿಸಿದ ಅಧಿಕಾರಿಗಳು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾ.ಪಂ ಕಚೇರಿಯ ಧ್ವಜದ ಕಂಬದ ಮುಂದೆ ಅಕ್ರವಾಗಿ ಕಟ್ಟಲಾಗಿದ್ದ ಅಂಗಡಿ ಕಟ್ಟಡವನ್ನು ತೆರವುಗೊಳಿಸುವಂತೆ ಕಳೆದ ನಾಲ್ಕೈದು ವರ್ಷಗಳಿಂದ ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಉಪವಾಸ ಸತ್ಯಾಗ್ರಹ ಸೇರಿದಂತೆ ಸಾಕಷ್ಟು ಹೋರಾಟವನ್ನು ಮಾಡಿಕೊಂಡು ಬಂದಿದ್ದರು, ಆದರೇ ಅಕ್ರಮ ಕಟ್ಟಡ ವಿಚಾರವಾಗಿ ಕೋರ್ಟ ವ್ಯಾಜ್ಯ ನಡೆದ ಕಾರಣ ವಿಳಂಬವಾಗಿತ್ತು. ಕಟ್ಟಡ ಕಟ್ಟಿರುವದು ಅಕ್ರಮ ಕಟ್ಟಡ ಎಂಬುವದು ಸಾಬಿತಾದ ಹಿನ್ನಲೇಯಲ್ಲಿ ಶನಿವಾರ ಬೆಳಿಗ್ಗೆ ತಾಲೂಕು ಪಂಚಾಯಿತ ಇಒ ಪ್ರವೀಣಕುಮಾರ ಸಾಲಿ…
