Prashanth Angadi

ಅಕ್ರಮವಾಗಿ ಸಾಗಿಸುತ್ತಿದ್ದ 4,750 ಕೆಜಿ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿತಹಸೀಲ್ದಾರ್ ಎಂ.ಎಸ್ .ತನ್ಮಯ್ ಸೂಚನೆಯಂತೆ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಗುಂಡ್ಲುಪೇಟೆ ಪಟ್ಟಣದ ಹಳ್ಳದಕೇರಿ ಬಳಿ ಸರಕು ಸಾಗಣೆ ವಾಹನವನ್ನು ಪರಿಶೀಲಿಸುವ ಸಲುವಾಗಿ ತಡೆಯಲಾಯಿತು. ಈ ವೇಳೆ ಚಾಲಕ ಸರಕು ತುಂಬಿದ್ದ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾದ. ಬಳಿಕ ಪರಿಶೀಲನೆ ನಡೆಸಿದಾಗ ವಾಹನದಲ್ಲಿ 4,750 ಕೆಜಿ ಪಡಿತರ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿತುಂಬಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ನಂತರ ವಾಹನ ಸಹಿತ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಯಿತು….

Read More

ಕಲಬುರಗಿ | ಸಂಘವೊಂದರ ನೋಂದಣಿ ಮಾಡುವುದಕ್ಕಾಗಿ ಲಂಚದ ಬೇಡಿಕೆಯಿಟ್ಟು, 5 ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕಲಬುರಗಿ: ಸಂಘವೊಂದರ ನೋಂದಣಿ ಮಾಡುವುದಕ್ಕಾಗಿ ಲಂಚದ ಬೇಡಿಕೆಯಿಟ್ಟು, 5 ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ಸೇಡಂ ಪಟ್ಟಣದಲ್ಲಿ ನಡೆದಿದೆ. ಬೀರಲಿಂಗೇಶ್ವರ ಹೊಸ ಕೋಳಿ ಸಾಕಾಣಿಕೆ ಮಾಡೋದಕ್ಕೆ ಹಾಗೂ ಮಾರಾಟಗಾರರ ಸಹಕಾರಿ ಸಂಘದ ನೊಂದಣಿಗೆ ಅಧಿಕಾರಿ ಮಲ್ಲಿಕಾರ್ಜುನ್ ಅವರು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಬೀರಪ್ಪ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಲೋಕಾ ಪೊಲೀಸರು ದಾಳಿ ನಡೆಸಿ,…

Read More

ಮನೋರಂಜನೆಗಾಗಿ ಮಂಟೂರಿನ ಆರೂಢ ಧಾಮ ಒಮ್ಮೆ ಭೇಟಿ ನೀಡಿ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಂಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಂಟೂರಿನ ಆರೂಢ ಧಾಮ ಒಮ್ಮೆ ಭೇಟಿ ನೀಡಿ ಮುಧೋಳದಿಂದ 14 ಕಿ.ಮೀ ದೂರದಲ್ಲಿ ಹಾಗೂ ಲೋಕಾಪೂರದಿಂದ 32 ಕಿ.ಮೀ ದೂರದಲ್ಲಿ ಬಾಗಲಕೋಟೆಯಿಂದ 49 ಕಿ.ಮೀ ದೂರದಲ್ಲಿದೆ ಇದೆ. ಒಂದು ಕಾಲದಲ್ಲಿ ಕಬ್ಬು ಬೆಳೆಗೆ ಹೆಸರುವಾಸಿಯಾಗಿದ್ದ ಮಂಟೂರು, ಈಗ ಆರೂಢ ಧಾಮ ಮತ್ತು ಶಿವನ ಪ್ರತಿಮೆ ಮೂಲಕ ಇನ್ನೊಂದು ರೀತಿಯ ಪ್ರಸಿದ್ದಿ ಸ್ಥಾನವಾಗಿದೆ ಪ್ರವಾಸಿಗರು ನೋಡುವ ಒಂದು ಸ್ಥಳ ಕೂಡ ಆಗಿದೆ. ಮಂಟೂರು ಪ್ರವೇಶಿಸುತ್ತಿದ್ದಂತೆಯೇ ಕಾಣಿಸುವುದು…

Read More

ರಾಮದುರ್ಗ ಬೀಳಗಿ ನಗರ ಸಿ.ಸಿ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡಿತಾಇದು ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸಾರ್ವಜನಿಕರಿಂದ ಪುರಸಭೆಗೆ ಮನವಿ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬೀಳಗಿ ನಗರದಲ್ಲಿ ಸಿ. ಸಿ.ರಸ್ತೆ ಕಾಮಗಾರಿ ನಡಿತಾಇದು ಮೊದಲ ಹಂತದಲ್ಲಿ ಬೆಡ್ ಕಾಂಕ್ರೀಟ್ ಹಾಕಿದ್ದು ಎಲ್ಲಿ ನೋಡಿದರೂ ಕಲ್ಲುಗಳು ಎದ್ದು ಕಾಣುತ್ತದೆ ಸರಿಯಾಗಿ ಬೆಡ್ ಕಾಂಕ್ರೀಟ್ ಹಾಕಿಲ್ಲ ಹಾಗೂ ಸೈಕಲ್ ಮೋಟಾರ್ ವಾಹನಗಳು ಸ್ಕಿಡ್ ಆಗಿ ಬೀಳುವ ಸಾಧ್ಯತೆ ಇದೆ ಇವಾಗ ಹೀಗಾದರೆ ಮುಂದೆ ಸಿ.ಸಿ.ರಸ್ತೆ ತಾಳಿಕೆ ಬರುತ್ತಾ ಎಂದು ಸಾರ್ವಜನಿಕರು ಆರೋಪಿಸಿದರು. ಇದು ಸಂಪೂರ್ಣ ಕಳಪೆ ಮಟ್ಟದಲ್ಲಿ ಕಾಮಗಾರಿ ನಡಿತಾಇದೆ ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಇತ್ತ ಕಡೆ…

Read More

ರಾಮದುರ್ಗ : ಬೀಳಗಿ ನಗರ ಸಿ.ಸಿ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ನಡಿತಾಇದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬೀಳಗಿ ನಗರದಲ್ಲಿ ಸಿ. ಸಿ.ರಸ್ತೆ ಕಾಮಗಾರಿ ನಡಿತಾಇದ್ದು ಮೊದಲ ಹಂತದಲ್ಲಿ ಬೆಡ್ ಕಾಂಕ್ರೀಟ್ ಹಾಕಿದ್ದು ಎಲ್ಲಿ ನೋಡಿದರೂ ಕಲ್ಲುಗಳು ಎದ್ದು ಕಾಣುತ್ತದೆ ಸರಿಯಾಗಿ ಬೆಡ್ ಕಾಂಕ್ರೀಟ್ ಹಾಕಿಲ್ಲ ಹಾಗೂ ಸೈಕಲ್ ಮೋಟಾರ್ ವಾಹನಗಳು ಸ್ಕಿಡ್ ಆಗಿ ಬೀಳುತ್ತವೆ ಇವಾಗ ಹೀಗಾದರೆ ಮುಂದೆ ಸಿ.ಸಿ.ರಸ್ತೆ ತಾಳಿಕೆ ಬರುತ್ತಾ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಇದು ಸಂಪೂರ್ಣ ಕಳಪೆ ಮಟ್ಟದಲ್ಲಿ ಕಾಮಗಾರಿ ನಡಿತಾಇದೆ ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮತ್ತೊಮ್ಮೆ ಬೆಡ್…

Read More

ಮುದಕವಿ ಗ್ರಾಮದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿ ರಾಷ್ಟ್ರೀಯ ಪೋಷಣ ಮಾಸಾಚಾರಣಿ ಕಾರ್ಯಕ್ರಮ ಜರಗಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತಿ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಶಿಶು ಅಭಿವೃದ್ಧಿ ಯೋಜನೆ, ರಾಮದುರ್ಗ ಇವರ ಸಂಯೋಗದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿ ರಾಷ್ಟ್ರೀಯ ಪೋಷಣ ಮಾಸಾಚಾರಣಿ ಕಾರ್ಯಕ್ರಮ ಜರಗಿತು. ಈ ವೇಳೆ ಮುದಕವಿ ಗ್ರಾಮ ಪಂಚಾಯತ್ ಅಧ್ಯಕ್ಷ ವಹಿದ್ ಅಹ್ಮದ್ ಕಾಜಿ, ಉಪಾಧ್ಯಕ್ಷರು ಶಿವಾನಂದ ಮಠಪತಿ, ಗ್ರಾಮ ಪಂಚಾಯತಿ ಸದಸ್ಯರು ವೈ ಕೆ ಕಳಸಗೌಡ್ರು, ಅತಿಥಿಗಳು ಉಮೇಶ್ ಏಣಿ, ಅಂಗನವಾಡಿ ಮೇಲ್ವಿಚಾರಕರು…

Read More

ಪೊಲೀಸರ ಬಗ್ಗೆ ಫೇಸ್ಬುಕ್​ನಲ್ಲಿ ನೇರ ಪ್ರಸಾರ ಮಾಡಿದರೆ ಕ್ರಿಮಿನಲ್ ಅಪರಾಧವಾಗುವುದಿಲ್ಲ – ಹೈಕೋರ್ಟ್​!

ಹಿಮಾಚಲ ಪ್ರದೇಶ : ಪೊಲೀಸರ ಕ್ರಮವನ್ನು ಪ್ರತಿಭಟಿಸಿದರೆ ಅಥವಾ ಅನಿಯಂತ್ರಿತ ಭಾಷೆ ಬಳಸಿದರೆ ಅದು ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಅಡ್ಡಿಪಡಿಸುವ ಕ್ರಿಮಿನಲ್ ಅಪರಾಧವಾಗುದಿಲ್ಲ ಎಂದು ಹೇಳಿರುವ ಹಿಮಾಚಲ ಪ್ರದೇಶ ಹೈಕೋರ್ಟ್, ಚಾಲಕನೋರ್ವನ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದೆ. ಸಂಚಾರ ಕರ್ತವ್ಯ ನಿರತ ಪೊಲೀಸರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಹೇಳಿದಾಗ ಫೇಸ್‌ಬುಕ್ ನೇರಪ್ರಸಾರ ಕೈಗೊಂಡು ಕೆಲ ಟೀಕೆಗಳನ್ನು ಮಾಡಿದ್ದ ಚಾಲಕನೊಬ್ಬನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಶರ್ಮಾ ಅವರ ಪೀಠ ಈ ವಿಚಾರ ತಿಳಿಸಿದೆ….

Read More

ನಾಗನೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ !

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಬಟಕುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ಬಂದಿದೆ.ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ (ಜೆಜೆಎಂ) ಜಾರಿಗೊಳಿಸಿದೆ. ಆದರೆ ಈ ಗ್ರಾಮದಲ್ಲಿ ಜಲಜೀವನ ಮಷೀನ್ ಇದ್ದರು ಇಲ್ಲದಂತಾಗಿದೆಮೊದಲು ಸ್ವಲ್ಪ ಸ್ವಲ್ಪ ನೀರು ಬರುತ್ತಿತ್ತು ಇವಾಗ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ಬಂದಿದೆ ಇದರ ಬಗ್ಗೆ ನಾಗನೂರ ಗ್ರಾಮಸ್ಥರು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ…

Read More

ಹೊಸಕೋಟಿ ವಲಯದ ಸಾಲಾಪುರ ಗ್ರಾಮದಲ್ಲಿ ಪೋಷಣ ಮಾಸ ಕಾರ್ಯಕ್ರಮ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಬಹುದು ಆರೋಗ್ಯವಂತ ಮಗು ಜನನವಾಗುತ್ತದೆ ಎಂದು ಪ್ರಾಸ್ತಾವಿಕ ಮಾತನಾಡಿದರು. ಗರ್ಭಿಣಿಯರಿಗೆ ಸೀಮಂತ,ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಅಂಗನವಾಡಿ ಮಕ್ಕಳಿಂದ ವಿವಿಧ ವೇಷಭೂಷಣ ಕಾರ್ಯಕ್ರಮ ಮಕ್ಕಳಿಂದ ಲಂಬಾಣಿ ನೃತ್ಯ ಮಾಡಿಸಲಾಯಿತು.ಪೌಷ್ಠಿಕ ಆಹಾರ ಪ್ರದರ್ಶನ ಮಾಡಲಾಯಿತು. ಸಾಲಾಪುರ ಗ್ರಾಮ ಪಂಚಾಯತ ಅಧ್ಯಕ್ಷರು ಲಾಲಪ್ಪ ಲಮಾಣಿ,ಸದಸ್ಯರಾದ ದುಂಡಪ್ಪ ದೇವರೆಡ್ಡಿ,ಅನಿಲ್ ಚಾಕಲಬ್ಬಿ, ಆನಂದ್ ಕ್ವಾರಿ, ಕೃಷ್ಣ ಬಂಡಿ ವಡ್ಡರ್,ನಿಂಗಪ್ಪ ಅವರಾದಿ, ಯಲ್ಲವ್ವ…

Read More

ಶಬ್ಬರಿ ಕೊಳ್ಳದಲ್ಲಿ : ಅಕ್ರಮವಾಗಿ ಮರಂ ಸಾಗಾಟ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಣ್ಣಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಬರಿಕೊಳ್ಳದ ದೇವಸ್ಥಾನದ ಹಿಂದುಗಡೆ ಸರ್ವೇ ನಂಬರ್ 93/A ಈ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ ಸುಮಾರು ತಿಂಗಳಿನಿಂದ ನಡಿತಾ ಇದೆ. ಪರವಾನಗಿ ಪಡೆಯದೆ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಜೆಸಿಬಿ ಮೂಲಕ ಅಗೆದು ಟಿಪ್ಪರ್ ಮೂಲಕ ಮರಂ ಸಾಗಾಣೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ. ಇದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಳಗಾವಿ ಇವರಿಗೆ ಮಾಹಿತಿ ನೀಡಿದಾಗ…

Read More