ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನೇಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನೇಕಾರರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ನೇಕಾರ ಆತ್ಮಹತ್ಯೆ ಪೈಲ್ಗಳು ಕೇವಲ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಗೆ ಸಿಮೀತವಾಗಿವೆ. ಸರಕಾರ ಮಾತ್ರ ಬಡ ನೇಕಾರರಿಗೆ ಪರಿಹಾರ ನೀಡುತ್ತಿಲ್ಲ. ನೇಕಾರರು ಸಾಲದ ಮೇಲೆ ಸಾಲ ಮಾಡಿ ಜೀವನ ನಡೆಸುವದೇ ದುಸ್ಥರವಾಗಿದೆ. ಸಾಲಭಾದೆಗೆ ದಿಕ್ಕು ತೋಚದಂತಾಗಿ ಆತ್ಮಹತ್ಯೆಗಳು ನಡೆಯುತ್ತಲಿವೆ.ಜವಳಿ ಮಾರುಕಟ್ಟೆ ಕುಸಿತ ಹಾಗೂ ಕಚ್ಚಾ ನೂಲಿನ ಬೆಲೆ ಏರಿಕೆಯಿಂದ ಬಡ ನೇಕಾರ ಕುಟುಂಬಗಳು ತತ್ತರಿಸಿ ಹೋಗಿದ್ದು, ಅಲ್ಲದೇ…
