ಸ್ವಾಮಿತ್ವ ಯೋಜನೆ ಮೂಲಕ 375ಗ್ರಾಮವಾಸಿಗಳ ಆಸ್ತಿ ನಿಖರತೆಗೆ ಡ್ರೋನ್ ಸಮೀಕ್ಷೆ: ಸಚಿವ ಸಂತೋಷ ಲಾಡ್.
ಧಾರವಾಡ ಅನೇಕ ಗ್ರಾಮವಾಸಿಗಳು ಎಷ್ಟೊ ವರ್ಷದಿಂದ ಇದೇ ಜಾಗದಲ್ಲಿದ್ದರೂ ಅವರಲ್ಲಿ ಸರಿಯಾದ ಅಳತೆ ಇಲ್ಲ. ಇದರಿಂದ ವ್ಯಾಜ್ಯ, ಆರ್ಥಿಕ ನಷ್ಟಗಳು ಆಗುತ್ತಿದೆ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆ ಮೂಲಕ 375 ಗ್ರಾಮಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಿ, ಮಾಲಿಕರಿಗೆ ಅವರ ಅವರ ಆಸ್ತಿಯನ್ನು ನಿಖರವಾಗಿ ಗುರುತಿಸಲಾಗುತ್ತದೆ. ಇದಕ್ಕೆ ಗ್ರಾಮಸ್ಥರ, ಗ್ರಾಮ ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸ್ವಾಮಿತ್ವ ಯೋಜನೆಯಡಿ ಡ್ರೋನ್…
