ವಕ್ಛ್ ಹೆಸರಿನಲ್ಲಿ ಭೂ ಕಬಳಿಕೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದಿನ ಹುತಾತ್ಮ ಚೌಕದಿಂದ ಆರಂಭಗೊಂಡ ಪ್ರತಿಭಟನೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಮಿನಿ ವಿಧಾನಸೌಧಕ್ಕೆ ತೆರಳಿ ಸಮಾವೇಶಗೊಂಡಿತು.ರೈತರ ಜಮೀನುಗಳನ್ನು ವಕ್ಪ ಹೆಸರಿನಲ್ಲಿ ದಾಖಲು ಮಾಡುವ ಕಾಂಗ್ರೆಸ್ ಸರಕಾರದ ಕ್ರಮವನ್ನು ಪಕ್ಷ ಸಹಿಸುವುದಿಲ್ಲ. ಕೂಡಲೇ ಸರಕಾರ ವಕ್ಪ ಮಂಡಳಿಯ ಹೆಸರಿನಲ್ಲಿರುವ ರೈತರ ಜಮೀನುಗಳನ್ನು ಮೂಲ ಮಾಲಕರ ಹೆಸರಿನಲ್ಲಿ ದಾಖಲು ಮಾಡಬೇಕು. ೧೯೫೨ ರಲ್ಲಿ ವಕ್ಪ ಮಂಡಳಿ ರಚನೆ ಮಾಡಿದಾಗ ಇಡೀ ದೇಶದಲ್ಲಿ ೧.೨೦ ಲಕ್ಷ ಎಕರೆ ಜಮೀನು ವಕ್ಪ ಹೆಸರಿನಲ್ಲಿ…
