ಬೆಳಗಾವಿ ಜಿಲ್ಲೆ ಸವದತ್ತಿ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸಚಿವ ದಿನೇಶ ಗುಂಡೂರಾವ್ ನೆರವೇರಿಸಿ ಅವರು ಮಾತನಾಡಿದರು , ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸವದತ್ತಿಯ ತಾಲೂಕು ಆಸ್ಪತ್ರೆಗಳಲ್ಲೂ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ 9 ಐಸಿಯು ವ್ಯವಸ್ಥೆಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ತಾಲೂಕಿಗೆ 100 ಹಾಸಿಗೆಗಳ ಆಸ್ಪತ್ರೆ ಅಗತ್ಯವಾಗಿತ್ತು. ಮಂಜೂರಾತಿಗೆ ಮಾಡಿದ ಸರ್ಕಾರ ಮತ್ತು ಸಚಿವರಿಗೆ ಧನ್ಯವಾದ. ಮುನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಯರಗಟ್ಟಿ ಸಮುದಾಯ ಆರೋಗ್ಯವನ್ನು ಕೇಂದ್ರ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಆರ್.ವಿ.ಪಾಟೀಲ, ಸದಾಶಿವ ಕೌಜಲಗಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ವಿನಯ ನಾವಲಗಟ್ಟಿ, ಡಿಎಚ್ಒ ಈಶ್ವರ ಗಡಾದ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಸುನೀಲ ಹನಮನ್ನರ, ವಿಭಾಗೀಯ ಜಂಟಿ ನಿರ್ದೇಶಕಿ ಪುಷ್ಪಾ ಎಚ್.ಆರ್., ಎಂ.ಎಸ್.ಪುರದಗುಡಿ, ಟಿಎಚ್ಒ ಡಾ.ಶ್ರೀಪಾದ ಸಬನೀಸ್, ಅಶೋಕ ಮುರಗೋಡ, ಲತೀಫ್ ಸವದತ್ತಿ, ಮೊಹಮ್ಮದಸಲೀಂ ಕಿತ್ತೂರು, ರಿಜ್ವಾನ್ ದೇಸಾಯಿ, ಡಾ.ಬಿ.ವಿ.ಕಾಡರಕೊಪ್ಪ, ಡಾ.ಸತೀಶ ಕಬಾಡೆ, ಡಾ.ಪ್ರತಾಪ್ಸಿಂಗ್ ರಜಪೂತ, ಡಾ.ಪ್ರಗತಿ ಬೊರಗಾಂವ ಪಾಲ್ಗೊಂಡಿದ್ದರು.



