ನವೆಂಬರ 12 ರಂದು ಲೋಕಾಪೂರದಿಂದ ಧಾರವಾಡದವರೆಗೆ ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕೆಂದು ಹಲವಾರು ಹೋರಾಟಗಳು ನಡೆದಿವೆ. ಅದರ ಭಾಗವಾಗಿ ರಾಮದುರ್ಗದಲ್ಲಿ 2005 ರಿಂದ ರಾಮದುರ್ಗದಿಂದ ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಹಾಗೂ ಅಲ್ಲಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟಗಳು ನಡೆದಿವೆ. ರಾಮದುರ್ಗದಲ್ಲಿ ಹೋರಾಟ ನಡೆಯುತ್ತಿರುವ ಮೊದಲೇ ಬಾಗಲಕೋಟೆಯಲ್ಲಿ ರೈಲ್ವೆ ಮಾರ್ಗದ ಬೇಡಿಕೆ ಇಟ್ಟುಕೊಂಡು ಬಾಗಲಕೋಟದಿಂದ ಕುಡಚಿಯ ವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ಸತತ ಹೋರಾಟದಿಂದ ಕೊನೆಗೂ ಕೇಂದ್ರ ರಾಜ್ಯ ಸರಕಾರಗಳು ಬಾಗಲಕೋಟದಿಂದ ಕುಡುಚಿಯವರೆಗೆ ರೈಲ್ವೆ ಮಾರ್ಗಕ್ಕೆ…
