ಬುದ್ನಿ ಖುರ್ದ ಗ್ರಾಮದಲ್ಲಿ ನಡೆದ ಜಾನಪದ ಮತ್ತು ಸಂಗೀತ ಉತ್ಸವ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬುದ್ನಿ ಖುರ್ದ ಗ್ರಾಮದ ಡಾ| ಬಿ.ಆರ್. ಅಂಬೇಡ್ಕರ್ ರಂಗ ಮಂದಿರದಲ್ಲಿ ಜಾನಪದ ಕಲಾ ಪರಿಷತ್ (ರಿ) ಹಲಗತ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಮತ್ತು ಸಂಗೀತ ಉತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಕಲಾ ಪ್ರೇಮಿ ಶಂಕರ ಬಣಪ್ಪನವರ ಪಾಲ್ಗೊಂಡು ಮಾತನಾಡಿದರು.ಜಾನಪದ ಕಲೆ ತನ್ನದೇ ಆದ ಒಂದು ಇತಿಹಾಸ ಹೊಂದಿದೆ. ಹಳ್ಳಿಯ ಸೊಗಡಿನಲ್ಲಿ ಜಾನಪದ, ಭಜನಾ, ಸೋಬಾನ ಪದ, ರಿವಾಯತ್ ಪದ, ಸುಗಮ ಸಂಗೀತ…
