ಟೆಂಡರ್ ಪ್ರಕಾರ ಶೌಚಾಲಯ ಶುಲ್ಕ ಪಡೆಯಬೇಕೆಂದು ಪ್ರಶಾಂತ ಅಂಗಡಿ ಅವರು ಘಟಕ ವ್ಯವಸ್ಥಾಪಕರಾದ ಕೆ. ಬಿ. ಅಮ್ಮಣಗಿ ರವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ರಾಮದುರ್ಗ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ . ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗಾಗಿ ಮಹಿಳೆಯರಿಂದ ಹಣ ಪಡೆಯಲಾಗುತ್ತಿದ್ದು,ಟೆಂಡರ್ ಷರತ್ತು ಉಲ್ಲಂಘಿಸುತ್ತಿದ್ದಾರೆ. ಟೆಂಡರ್ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ವಿಧಿಸಿದ ಷರತ್ತುಗಳ ಉಲ್ಲಂಘನೆಯಾಗುತ್ತಿದೆ. ಶೌಚಾಲಯ ಬಳಕೆದಾರರಿಂದ ಗುತ್ತಿಗೆದಾರರು 1ರಿಂದ 2ರೂ. ಪಡೆಯಬೇಕು ಎಂಬ ನಿಯಮಗಳಿದ್ದರೂ…
