ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸಭೆ

WhatsApp Group Join Now

ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಹೋರಾಟಕ್ಕೆ ತಯಾರಾಗಲು ಜಿಲ್ಲಾಧ್ಯಕ್ಷ ಎಸ್ ಜಿ ಸಿದ್ನಾಳ ಕರೆ ‌‌.

ಬೈಲಹೊಂಗಲ ನಗರದ ವಿಠ್ಠಲ ರುಕ್ಮಿಣಿ ಸಮುದಾಯ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸಭೆ ಸೇರಿತು ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು ಬಿ ಎಸ್ ತೇಗೂರ ವಹಿಸಿದ್ದರು ಸಭೆಯ ಉದ್ಘಾಟನಾ ಮಾಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಎಸ್ ಜಿ ಸಿದ್ನಾಳ 7ನೇಯ ವೇತನ ಆಯೋಗದ ಶಿಫಾರಸಿನಂತೆ 70, 75ವರ್ಷದವರಿಗೆ 10% 15% ಹೆಚ್ಚಿನ ಪಿಂಚಣಿ ನೀಡುವಂತೆ ವರದಿಯಲ್ಲಿ ತಿಳಿಸಿದ್ದರೂ ಇನ್ನು ವರೆಗೆ ನೀಡಿಲ್ಲ ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲು ಮನವಿಯನ್ನು ಸಲ್ಲಿಸಿದೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಅದು ಆಗಿರುವುದಿಲ್ಲ ಬೇಡಿಕೆ ಗಳನ್ನು ಈಡೇರಿಕೆಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ನಮ್ಮ ಶಕ್ತಿಯನ್ನು ತೋರಿಸಲು ತಯಾರಾಗಲು ವಿನಂತಿಸಿದರು ಹಿಂದೆ 1972 ನೇ ಇಸ್ವಿಯಲ್ಲಿ ಪಿಂಚಣಿ ಕೊಡಬಾರದು ಎಂದು ಆಗಿನ ಸರ್ಕಾರ ತಿಳಿಸಿತ್ತು ಆಗಿನ ನಿವೃತ್ತ
ಸುಪ್ರೀಂ ಕೋರ್ಟ್ ಜಡ್ಜ್ ದಿವಂಗತ ಡಿ ಎಸ್ ನಕ್ಕರೆ ವಕೀಲರಾಗಿ ಸತತ 10 ವರ್ಷಗಳ ಕಾಲ ಹೊರಾಡಿ ಪಿಂಚಣಿ ಪಡೆಯುವುದು ನಮ್ಮ ಹಕ್ಕು ಬಿಕ್ಷೆಯಲ್ಲ ಪ್ರತಪಾದನೆ ಮಾಡಿ ಆಗಿನ ಸುಪ್ರೀಂ ಕೋರ್ಟ್ ಜಡ್ಜ್ ಚಂದ್ರಚೂಡ್ ಅವರು ಹಕ್ಕು ಅಂತಾ ಆದೇಶ ಮಾಡಿದ್ದಾರೆ ಅದು, ಪ್ರತಿಫಲವೇ ಪಿಂಚಣಿ ಪಡೆಯುತ್ತೀದ್ದೇವೆ ಅವರ ಸ್ಮರಣೆ ಮಾಡಬೇಕು ಎಂದು ತಿಳಿಸಿದರು ನಿವೃತ್ತ ನೌಕರರ ಸಹೋದರ, ಸಹೋದರೀಯರೆ ನೀವು ಇರುವ ಜೀವಂತ ಇರುವಾಗ ಯಾರೀಗೂ ಆಸ್ಥಿ ಬರೆಯಬೇಡಿರಿ ನೀವು ಇರುವ ತನಕ ಸಂತೋಷದಿಂದ ನಗು ನಗುತ್ತಲೇ ಇರಬೇಕೆಂದು ತಿಳಿಸಿದರು ಇಡೀ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮಾದರಿ ಸಂಘಗಳಾಗಿವೆ ಎಂದು ಹೇಳಿದರು ಹಿರಿಯ ನಾಗರಿಕರ ಸಂಘದ ರಾಜ್ಯ ಅಧ್ಯಕ್ಷರಾದ ಎಂ ವಾಯ ಬೆಂಡಿಗೇರಿ ಮಾತನಾಡಿ ಬೈಲಹೊಂಗಲ ತಾಲೂಕಿನ ಶಾಖೆಯನ್ನು ಉದ್ಘಾಟಿಸಿ ನಿವೃತ್ತಿ ನಂತರ ಹಿರಿಯ ನಾಗರಿಕರಿಗೆ ಕ್ರೀಯಾಶೀಲರಾಗಿ ಸಂಘವನ್ನು ಬಲಪಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ 2007,2009 ರಾ ಹಿರಿಯ ನಾಗರಿಕರಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಬಗ್ಗೆ ವಿವರವಾಗಿ ತಿಳಿಸಿದರು . ಅಧ್ಯಕ್ಷತೆ ವಹಿಸಿದ್ದ ಬಿ ಎಸ್ ತೇಗೂರ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಸಂಘದ ಕಟ್ಟಡದ ಕುರಿತು ತಿಳಿಸಿದರು ‌ ಪರಮಪೂಜ್ಯ ಸುರೇಶ ಸ್ವಾಮೀಜಿ, ವೇ , ವೀರಯ್ಯ ಸ್ವಾಮೀಜಿ ಗಳು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೀಯ ಎಂದು ಹೇಳಿದರು ಮತ್ತು ಎಲ್ಲರೂ ಆನಂದದಿಂದ ಬಾಳಿರಿ ಎಂದು ಆಶಿರ್ವಾದ ಮಾಡಿದರು. ‌ ಬೆಳಗಾವಿ ಕಾರ್ಯದರ್ಶಿ ಮುದಕವಿ, ಜಿಲ್ಲಾ ಅಧ್ಯಕ್ಷ ಕೆಂಚರಾಹುತ,ಹೊಳೆಯಾಚಿ, ಎಂ ವಾಯ ಮೆಣಸಿನಕಾಯಿ, ಕಡಿ ಪಟ್ಟಿಹಾಳ , ಎಂ ಸಿ ಅಮ್ಮಿನಭಾವಿ, ತಡಸಲ ,ಶೀಗೆಹಳ್ಳಿ , ಮಾರಿಹಾಳ, ಕುಲಕರ್ಣಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು ‌ನಿರೂಪಣೆ ಯನ್ನು ಕುಂಬಾರ ಮಾಡಿದರು ಎಚ ಬಿ ಸುಂಕದ ಕಾರ್ಯದರ್ಶಿ ಲೆಕ್ಕಪತ್ರ ಮಂಡಿಸಿದರು ವಂದನಾರ್ಪಣೆ ಯೊಂದಿಗೆ ಸಭೆ ಮುಕ್ತಾಯವಾಯಿತು

About The Author