ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸಿದರು.
ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನುಲಿಯ ಚಂದಯ್ಯನವರು, ಕಾಯಕ ಶರಣರಾದ ಬಸವಣ್ಣನವರ ಜೊತೆ ಸೇರಿ ಸಮಜದಲ್ಲಿರುವಂತಹವರನ್ನು ತಮ್ಮ ತಮ್ಮ ಕಸುಬುಗಳ ಮೂಲಕ ಎಲ್ಲರಂತೆ ದುಡಿದು ಜೀವನ ನಡೆಸಿಕೊಂಡು ಬದುಕುವಂತೆ ಸಮಾಜಕ್ಕೆ ಪ್ರೇರಣೆ ನೀಡಿದರು. ಚಂದ್ಯಯನವರು ಮನೆಯಲ್ಲಿ ಕೆರೆಯ…
