ನಡುರಸ್ತೆಯಲ್ಲಿ ಹಡೆದವ್ವನ ಬಿಟ್ಟಿದ್ದ ಮಗ : ಕೊನೆಗೂ ಮನೆ ಸೇರಿದ ವೃದ್ಧ ತಾಯಿ.
ಬೆಳಗಾವಿ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಮಗ ಪರಾರಿಯಾದ ಘಟನೆ ಬೆನ್ನಲ್ಲೇ ಕೊನೆಗೂ ಹಡೆದವ್ವನನ್ನು ಮರಳಿ ಮನೆಗೆ ಕರೆದೊಯ್ಯುವ ಮೂಲಕ ಮಗ ಮಾಡಿದ ತಪ್ಪಿಗೆ ನೋವುಂಡ ಘಟನೆ ನಡೆದಿದೆ. ಹೌದು ಕಳೆದ ಮೂರು ದಿನಗಳ ಹಿಂದೆ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹೆತ್ತ ತಸಯಿಯನ್ನು ಬಿಟ್ಟು ಮಗ ಪರಾರಿಯಾಗಿದ್ದ. ಅಲ್ಲೇ ಒಂದು ರಾತ್ರಿ ಕಳೆದ ತಾಯಿ ಮರುದಿನ ಬೆಳಿಗ್ಗೆ ಮಗನ ಕ್ರೌರ್ಯ ಬಿಚ್ಚಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವ್ಯಕ್ತಿಯ ಕಾರ್ಯಕ್ಕೆ…
