ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿರವರಿಗೆ ಮನವಿ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ರಾಮದುರ್ಗದ ಜನತೆ ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹೋರಾಟದ ಭಾಗವಾಗಿ 2016-17 ರಿಂದ ಸರ್ವೇ ನಡೆದು 2019 ರಲ್ಲಿ ರೂ.1667 ಕೋಟಿ ಕ್ರೀಯಾ ಯೋಜನೆಯು ಆಗಿ ಕೆಲಸ ಪ್ರಾರಂಭವಾಗದೇ ಉಳಿದಿದೆ.ಕೆಲಸ ಏಕೆ ಪ್ರಾರಂಭವಾಗಲಿಲ್ಲ ಎಂಬುದು ನಿಗೂಢವಾಗಿದೆ. ಕೂಡಲೇ ಲೋಕಾಪೂರದಿಂದ ಧಾರವಾಡದವರೆಗೆ ರಾಮದುರ್ಗ ಸವದತ್ತಿ ರೈಲ್ವೆ ಮಾರ್ಗ ಪ್ರಾರಂಭ ಮಾಡಿ 3-4…
