ಕಬ್ಬಡಿ ಮತ್ತು ಥ್ರೋಬಾಲ ಕ್ರೀಡಾಕೂಟವನ್ನು ಅನಿಕೇತ ಪಟ್ಟಣ ಅವರು ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶ್ರೀ ಫಲಹಾರ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಂಯುಂಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕಬ್ಬಡಿ ಮತ್ತು ಥ್ರೋಬಾಲ ಕ್ರೀಡಾಕೂಟವನ್ನು ಅನಿಕೇತ ಪಟ್ಟಣ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪೂಜ್ಯರಾದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಟಿ ಬಳಿಗಾರ, ಶ್ರೀ ರಮೇಶ ಕಂಬಾರ, ಶ್ರೀ ಚಿನ್ನಪ್ಪ ಮುದೇನೂರ ಎಸ್.ಎಸ್ ಬೂದಿಹಾಳಮಠ ಹಾಗೂ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
