ಬೀಡಕಿ ಗ್ರಾಮದ ಶಿವಾನಂದ ಮಠದಲ್ಲಿ ನೂತನ ಗೋಶಾಲೆಯನ್ನು ಕಾಂಗ್ರೆಸ್ ಮುಖಂಡ ಪ್ರದೀಪ್ ಪಟ್ಟಣ ಉದ್ಘಾಟಿಸಿದರು.
ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದ ಶಿವಾನಂದ ಮಠದಲ್ಲಿ ಸದ್ಗುರು ಶ್ರೀ ರುದ್ರಮುನಿ ಮಹಾಸ್ವಾಮಿಗಳ ಗೋ ಶಾಲೆಯನ್ನು ಕಾಂಗ್ರೆಸ್ ಮುಖಂಡ ಪ್ರದೀಪ್ ಪಟ್ಟಣ ಉದ್ಘಾಟಿಸಿ ಮಾತನಾಡಿದ ಅವರು, ಗೋವುಗಳೆಂದರೆ ಪೂಜ್ಯ ಭಾವನೆ ಕಾಣುವ ನಮ್ಮಲ್ಲಿ ಅವುಗಳನ್ನು ರಕ್ಷಿಸುವದು ಅಷ್ಟೇ ಮುಖ್ಯವಾಗಿದೆ. ಪುಟ್ಟ ಗ್ರಾಮದಲ್ಲಿ ಶಿವಾನಂದ ಮಠದ ಶ್ರೀಗಳು ಗೋಶಾಲೆ ಆರಂಭಿಸಿರುವ ಮೂಲಕ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಗೋ ಶಾಲೆ ಆರಂಭಿಸಿದ್ದು ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸಂದರ್ಭ. ಶ್ರೀ ಮಠದ ಗೋ ಶಾಲೆಗೆ ಬೇಕಾಗುವ ಎಲ್ಲ ಸೌಲಭ್ಯವನ್ನು ಕೂಡಲೇ ಮಾಡಿಸಿ ಕೊಡುತ್ತೇವೆ….
