ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯು ಆಯೋಜಿಸಿದ್ದ ನೆಲಮಂಗಲದ ಎಮ್ ವಿ ಎಮ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 2ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ 2 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನೆಲಮಂಗಲದ ಎಮ್.ವಿ.ಎಮ್ ಕನ್ವೆನ್ಷನ್ ಹಾಲ್ ನಲ್ಲಿ ರವಿವಾರ ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಧರ್ಮದ ನೈತಿಕ ಮೌಲ್ಯಗಳ ಬಗ್ಗೆ ಚರ್ಚಿಸಲಾಯಿತು. ಕಾನಿಪ ಧ್ವನಿಯ ಸಂಸ್ಥಾಪಕ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ನಮ್ಮ ಕಾನಿಪ ಧ್ವನಿ ಸಂಘಟನೆಯು ಪತ್ರಕರ್ತರಿಗಾಗಿ ಹಗಲಿರುಳು ದುಡಿದು, ಎಲ್ಲರ ಪ್ರಗತಿಗಾಗಿ ಶ್ರಮದಾನ ಮಾಡಿತ್ತಿದ್ದು, ಇಂದು ಸರ್ಕಾರ ಪತ್ರಿಕಾ ಭವನಗಳನ್ನು ಕೆಲವು ಸಂಘಟನೆಗಳಿಗೆ ಸೀಮಿತ ಮಾಡಿದೆ….
