ಸಚಿವ ತಂಗಡಗಿ ಅರೆಹುಚ್ಚ ಎಂದ ದಡೆಸ್ಗೂರವರೇ ಸೋತು ಹುಚ್ಚರಾಗಿದ್ದಾರೆ
ಕೊಪ್ಪಳ : ಕನ್ನಡ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಸಭ್ಯ ರಾಜಕಾರಣಿ ಮತ್ತು ಘನತೆಗೆ ತಕ್ಕಂತೆ ನಡೆದುಕೊಳ್ಳುವ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಸವರಾಜ ದಡೆಸ್ಗೂರ ಒಮ್ಮೆ ಅಕಸ್ಮಾತ್ ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದರೆ ಜನ ಅಷ್ಟು ಕೆಟ್ಟದಾಗಿ ಸೋಲಿಸುತ್ತಿರಲಿಲ್ಲ ಎಂಬ ಪರಿಜ್ಞಾನ ಇಟ್ಟುಕೊಂಡರೆ ಒಳಿತು, ಇನ್ನು ಅವರ ಅವಧಿಯಲ್ಲಿ ಯಾವೆಲ್ಲ ಹಗರಣಗಳು, ಸುದ್ದಿಗಳು ತಿಂಗಳುಗಟ್ಟಲೇ ಮಾಧ್ಯಮಗಳಲ್ಲಿ…
