BREAKING NEWS

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ ಪರಿಶೀಲನೆ ಮಾಡಿದರು

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು ಲೋಕಸಭಾ ಸಾರ್ವತ್ರಿಕ ಚುನಾಣೆ -2024ಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯ ಆರ್.ಡಿ. ಹೈಸ್ಕೂಲಿನ ಮತ ಏಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ನಿತೇಶ್ ಪಾಟೀಲ ಅವರು ಗುರುವಾರದಂದು ಭೇಟಿ ನೀಡಿ‌ ಪರಿಶೀಲಿಸಿದರು. ಮತ ಏಣಿಕೆ ಕೇಂದ್ರದಲ್ಲಿನ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವಿಧಾನ ಸಭಾ ಕ್ಷೇತ್ರವಾರು ಸ್ಟ್ರಾಂಗ ರೂಂಗಳಿಗೆ ಒದಗಿಸಲಾದ ಭದ್ರತೆ ಹಾಗೂ ಮತ ಏಣಿಕೆ ಕೊಠಡಿಗಳನ್ನು ಪರಿಶೀಲಿಸಿದ…

Read More

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದಕೆಎಸ್‌ಆರ್‌ಟಿಸಿ ಬಸ್‌ ಪರಿಶೀಲನೆ ನಡೆಸಿದಾಗ ಹಣ ಮತ್ತುಚಿನ್ನ ಪತ್ತೆಯಾಗಿದೆ.ತುಮಕೂರು ನಗರದ ಬಟವಾಡಿ ಬಳಿ ಶುಕ್ರವಾರ ಬೆಳಗಿನಜಾವ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ನಗರದ ಚಿಕ್ಕಪೇಟೆಯ ಗಾರ್ಡನ್ರಸ್ತೆಯಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಕೆಲಸಮಾಡುತ್ತಿರುವ ನಾಗಭೂಷಣ್ ಎಂಬುವರು ಹಣ, ಚಿನ್ನತಗೆದುಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರುಪರಿಶೀಲನೆ ನಡೆಸಿ, ದುಡ್ಡು ಬಂಗಾರ ಜಪ್ತಿ ಮಾಡಿದ್ದಾರೆ.ವಿನೋದ್ ಎಂಬುವರಿಗೆ ಸೇರಿದ ಚಿನ್ನ, ಬೆಳ್ಳಿ ಅಂಗಡಿಯಲ್ಲಿಕೆಲಸ ಮಾಡುತ್ತಿದ್ದರು. ಎನ್‌ಇಪಿಎಸ್ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಏಪ್ರಿಲ್ 1ರಿಂದ ನರೇಗಾ ಕೂಲಿ ಹೆಚ್ಚಳ

ನವದೆಹಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಪ್ರಸಕ್ತ ಹಣಕಾಸು ವರ್ಷದ ಕೂಲಿಯನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೂಚಿಸಿರುವ ಹೊಸ ಕೂಲಿಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.ಕರ್ನಾಟಕದಲ್ಲಿ ಕೂಲಿ ಶೇ. 10.44ರಷ್ಟು ಪ್ರಮಾಣದಲ್ಲಿರುತ್ತದೆ, ಈಗಿರುವ ದೈನಂದಿನ 316 ರೂ. ಕೂಲಿಯು ಏಪ್ರಿಲ್ 1 ರಿಂದ ಇದು 349ರೂ. ಗೆ ಏರಿಕೆಯಾಗಲಿದೆ. ಅಧಿಸೂಚನೆಯ ಪ್ರಕಾರ, ಹರಿಯಾಣಕ್ಕೆ ಗರಿಷ್ಠ ಕೂಲಿ ದಿನಕ್ಕೆ 374 ರೂ. ನಿಗದಿಪಡಿಸಲಾಗಿದೆ, ಅರುಣಾಚಲ…

Read More

ವಾಹನ ಸವಾರರಿಂದ ಲಂಚ ಪಡೆಯುತ್ತಿರುವ ಪೊಲೀಸರು..!

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರ್ತಕಂತ ಬೆಳಗಾವಿ ಬಾಗಲಕೋಟ ಹೆದ್ದಾರಿ ರಸ್ತೆಯಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡುವ ವಿಚಾರದಲ್ಲಿ ವಾಹನ ಸವಾರರಿಂದ ಹಣ ಪಡೆದು ಅವರಿಗೆ ರಸೀದಿ ನೀಡದೆ ಇರುವುದುಬುಲೆರೋ ಪಿಕಪ್ ಹಾಗೂ ಇನ್ನಿತರ ವಾಹನಗಳಿಂದ ಹಣ ವಸೂಲಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ ಸಂಬಂಧ ಪಟ್ಟಂತಹ ಎಸ್ ಪಿ ಸಾಹೇಬರು ಕೂಡಲೆ ಕ್ರಮ ಜರಗಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ

Read More

ಉಪ್ಪಳದಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ದರೋಡೆ

ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಘಟನೆ ಬುಧವಾರ ಮಧ್ಯಾಹ್ನ ಕಾಸರಗೋಡಿನ  ಉಪ್ಪಳಪೇಟೆಯಲ್ಲಿ ನಡೆದಿದೆ. ವಾಹನದ ಗಾಜನ್ನು ಒಡೆದು 50 ಲಕ್ಷ ಪೆಟ್ಟಿಗೆಯನ್ನೇ ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಎ ಟಿ ಎಂ ಮೆಷಿನ್ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ.  ವಾಹನದಲ್ಲಿದ್ದ ನೌಕರರು ವಾಹನ ನಿಲ್ಲಿಸಿ ಎಟಿಎಂ ಮೆಷಿನ್ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸನ್ನು ತೆಗೆದುಕೊಂಡು ಹೋಗಲು ಮರಳಿ…

Read More

ಗ್ಯಾರಂಟಿ ಸ್ಕೀಂ ಪ್ರತಿ ಮನೆಗೂ ತಲುಪುತ್ತಿವೆ : ಜ್ಯೋತಿ ಸಂತಸ

ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಸ್ಕೀಂಗಳು ಬಡ ಮತ್ತು ಮಧ್ಯಮ ವರ್ಗದ ಪ್ರತಿ ಮನೆಗೂ ತಲುಪುತ್ತಿರುವದು ಅತ್ಯಂತ ಸಂತಸ ತಂದಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಖುಷಿ ವ್ಯಕ್ತಪಡಿಸಿದ್ದಾರೆ.ಅವರು ನಗರಸಭೆ ೨ನೇ ವಾರ್ಡಿನಲ್ಲಿ ಕಾಂಗ್ರೆಸ್ ಬಡಜನರಿಗಾಗಿ ಮಾಡಿರುವ ಅನ್ನಭಾಗ್ಯ, ಯುವನಿಧಿ, ಗೃಹಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಹಮ್ಮಿಕೊಂಡಿರುವ ಮನೆ ಮನೆ ಭೇಟಿ ವೇಳೆ ಕಂಡುಬಂದ ಮಾಹಿತಿ ಹಂಚಿಕೊಂಡು ಸಂತಸಪಟ್ಟರು.ಐದು…

Read More

ಬೀದರ್ ಕ್ಷೇತ್ರದ ಅತಿ ಕಿರಿಯ ಹಾಗೂ ಹಿರಿಯ ಸಂಸದರು..!

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ನಡೆದ ಬಹುತೇಕ ಚುನಾವಣೆಗಳು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿವೆ. ಐತಿಹಾಸಿಕವಾಗಿ ಪರಂಪರೆ, ಬಿದರಿ ನಗರ ಎಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೀದರ್‌, ರಾಜಕೀಯವಾಗಿಯೂ ವಿಶಿಷ್ಟವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿದೆ. ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯ ವಯಸ್ಸಿನ ಸಂಸದರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು ಸೇರಿದಂತೆ ಲೋಕಸಭಾ ಕ್ಷೇತ್ರ ಹಲವು ಮೊದಲುಗಳಿಗೆ ಹೆಸರುವಾಸಿಯಾಗಿದೆ..! ಕ್ಷೇತ್ರದ ಪ್ರಥಮ ಸಂಸದ ಮುಸ್ಲಿಂ 1952ರಲ್ಲಿ ದೇಶದಲ್ಲಿ…

Read More

ಮೋದಿ ಗೆಲುವಿಗೆ ಶ್ರಮಿಸುವುದಾಗಿ ಜಗದೀಶ ಶೆಟ್ಟರ್ ಪ್ರತಿಜ್ಞೆ.

ಬೆಳಗಾವಿ :  ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಥಳೀಯ ಮುಖಂಡರು ಮತ್ತು ಬೆಂಬಲಿಗರು ಆತ್ಮೀಯವಾಗಿ ಸ್ವಾಗತಿಸಿದಕ್ಕೆ ಕೃತಜ್ಞತೆ ಸಲ್ಲಿಸಿ, ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಇರುತ್ತದೆ ಎಂದು ದೃಢಪಡಿಸಿದರು. ಬೆಳಗಾವಿಗೆ ಚಿರಪರಿಚಿತರಾಗಿರುವ ನಾನು ಜಿಲ್ಲೆಯ ಎಲ್ಲಾ ಪ್ರಮುಖ ಬಿಜೆಪಿಯ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೋವಿಡ್ -19, ಪ್ರವಾಹದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾದ ಸೇವೆ ಸಲ್ಲಿಸುವ ಅವಕಾಶ ಭಾಗ್ಯ ನನ್ನದಾಗಿತ್ತು ಎಂದರು.  ಬೆಳಗಾವಿಗೆ ತಮ್ಮ ನಿಷ್ಠೆಯನ್ನು ಪ್ರತಿಪಾದಿಸಿದ ಜಗದೀಶ ಶೆಟ್ಟರ ನಗರದಲ್ಲಿ ಮನೆ ನಿರ್ಮಿಸಲು ವಾಗ್ದಾನ ಮಾಡಿದರಲ್ಲದೆ…

Read More

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಡಿಕೆಶಿ ಟೆಂಪಲ್ ರನ್ ಜೋರಾಗಿದೆ.

ಗೋಕರ್ಣ ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಟೆಂಪಲ್ ರನ್ ಜೋರಾಗಿದೆ.ಧರ್ಮಸ್ಥಳದಿಂದ ದೇವಸ್ಥಾನದ ಭೇಟಿ, ಪ್ರಾರ್ಥನೆ, ಪೂಜೆ ಸಲ್ಲಿಕೆ ಆರಂಭಿಸಿದ ಡಿಸಿಎ ಡಿಕೆ ಶಿವಕುಮಾರ್ ಇಂದು ಗೋಕರ್ಣಕ್ಕೆ ಆಗಮಿಸಿ ಶಿವನ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇಂದು ಗೋಕರ್ಣ ಆತ್ಮಲಿಂಗ ಪೂಜೆ ಸಲ್ಲಿಸುವ ವೇಳೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದರು. ಈ ಬಗ್ಗೆ ದೇವಸ್ಥಾನದ ಹೊರಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅರ್ಚಕರು ಹೇಳುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ….

Read More

ನಾಟಕ ಅಕಾಡಮಿಗೆ ಹೆಸರು ತನ್ನಿ, ಈ ಭಾಗಕ್ಕೆ ಅವಕಾಶ ನೀಡಿ – ಜ್ಯೋತಿ ಮನವಿ

ಕೊಪ್ಪಳ : ಕಾಂಗ್ರೆಸ್ ಸರಕಾರದಲ್ಲಿ ಉತ್ತರ ಕರ್ನಾಟಕದ ಬಹುತೇಕ ಕವಿ, ಕಲಾವಿದ, ಸಾಹಿತಿ, ಚಿಂತಕರಿಗೆ ವಿವಿಧ ಅಕಾಡಮಿಗಳಲ್ಲಿ ಅವಕಾಶ ನೀಡುವ ಮೂಲಕ ಉತ್ತರ ಕರ್ನಾಟಕದ ಬಹುದಿನಗಳ ಆಸೆಗೆ ನೀರೆರೆದಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಸಂತಸ ವ್ಯಕ್ತಪಡಿಸಿದ್ದಾರೆ.ಅವರು ನಗರದಲ್ಲಿ ನಾಟಕ ಅಕಾಡಮಿಗೆ ಸದಸ್ಯರಾಗಿ ನೇಮಕಗೊಂಡ ಸಮೀಪದ ಬಹೂದ್ದರಬಂಡಿ ಗ್ರಾಮದ ಹಿರಿಯ ರಂಗಕರ್ಮಿ, ಸಂಘಟಕ ಚಾಂದಪಾಶಾ ಕಿಲ್ಲೇದಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.ಚಾಂದಪಾಶಾ ಕಿಲ್ಲೆದಾರ್ ಅವರು ೧೮ನೇ…

Read More