BREAKING NEWS

ಕುಡಿಯುವ ನೀರು, ಮೇವು, ಬೀಜ-ಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಹಾಗೂ ಮಳೆಗಾಲ ಪೂರ್ವಭಾವಿ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಬೇಸಿಗೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಬರಗಾಲದ ಪರಿಸ್ಥಿತಿ ಇದ್ದರೂ ಈ ಬಾರಿ ಉತ್ತಮ‌ ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಈ ಬಾರಿ ಉತ್ತಮ‌ ಮಳೆಯಾಗುವ ನಿರೀಕ್ಷೆ ಇರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ…

Read More

ಕಾಲೇಜುಗಳಲ್ಲಿ ರೋಸ್ಟರ ಪ್ರಕಾರ ಪ್ರವೇಶ ಮಾಡಿಕೊಂಡ ವಿವರ ಪ್ರದರ್ಶಿಸುಂತೆ ಪರಿಷತ್

ವಿಜಯಪುರ : 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆಪ್ರವೇಶ ಪ್ರಾಂರಭವಾಗಿದ್ದು, ಬಹುತೇಕ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಪ್ರವೇಶ ಪಡೆದ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರದರ್ಶನ ಮಾಡದೇ ಈಗಾಗಲೇ ಪ್ರವೇಶಮುಕ್ತಾಯವಾಗಿವೆ, ಸೀಟ್ ಭರ್ತಿಯಾಗಿವೆ ಎಂಬ ಸಿದ್ದ ಉತ್ತರವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರವೇಶ ಪ್ರಕ್ರಿಯೆ…

Read More

ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಫೋಟೋಗ್ರಾಫರ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾಗರ ಬಸವನಹೊಳೆ ಸಮೀಪದಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಆನಂದಪುರ ಮೂಲದ ಫೋಟೋಗ್ರಾಫರ್ ಅರುಣ್ (30) ಸಾವನ್ನಪ್ಪಿರುವ ಮೃತ ಯುವಕನಾಗಿದ್ದಾನೆ. ಸಾಗರದಿಂದ ಆನಂದಪುರ ಕಡೆ ತೆರಳುತ್ತಿದ್ದ ಅರುಣ್ ರವರ ಬೈಕು ಹಾಗೂ ಆನಂದಪುರ ದಿಂದ ಸಾಗರದ ಕಡೆ ತೆರಳುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ನನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಬೈಕ್ ಸವಾರರನ್ನು…

Read More

ಬೋಟ್‌ನಲ್ಲಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿ ಪ್ರಯಾಣ ಬೆಳೆಸಿದ ಕಾರಣ ಬೋಟ್ ಮುಳುಗಡೆ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬೋಟ್‌ನಲ್ಲಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿ ಪ್ರಯಾಣ ಬೆಳೆಸಿದ ಕಾರಣ ಬೋಟ್ ಮುಳುಗಡೆ ಆಗಿರುವ ಘಟೆನೆ ನಡೆದಿದೆ.‌ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರು. ಈ ವೇಳೆ ಪ್ರವಾಸಿಗರನ್ನು ಹೊತ್ತೋಯ್ದ ಬೋಟ್ ಮುಳುಗಡೆಯಾಗಿ, ಬೋಟಿನಲ್ಲಿದ್ದ 40ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬೋಟ್ ಮುಡಂಗಿಯ ಗಣೇಶ್ ಎಂಬುವವರಿಗೆ ಸೇರಿದ್ದಾಗಿದೆ. ಘಟನೆ ನಡೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.

Read More

ಎಟಿಎಂ ನಲ್ಲಿ ಹಣ ಪಡೆದುಕೊಡಿ ಎಂದು ಕೇಳಿದಂತಹ ರೈತನೊಬ್ಬನಿಗೆ ಕೀಡಿಗೇಡಿಯೋರ್ವ ವಂಚಿಸಿ 61 ಸಾವಿರ ಲಪಟಾಯಿಸಿ ಪರಾರಿ

ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಮ್ ನಲ್ಲಿ ಜರುಗಿದ್ದು ಹನೂರು ತಾಲ್ಲೂಕಿನ ಕುರಟ್ಟಿಹೊಸರು ಗ್ರಾಮದ ರೈತ ಬಸವರಾಜು ಎಂಬಾತನೆ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ ಈತ ಹನೂರು ಪಟ್ಟಣದ ಕೆನರಾ ಬ್ಯಾಂಕ್ ನ ಎಟಿಎಂ ಗೆ ಆಗಮಿಸಿ ನನಗೆ ಹಣ ಪಡೆಯಲು ತಿಳಿದಿಲ್ಲ ನನಗೆ ಹಣ ತೆಗೆದುಕೊಳ್ಳಲು ಸಹಾಯ ಮಾಡಿ ಎಂದು ಅಪರಿಚಿತ ವ್ಯಕ್ತಿ ಬಳಿ ಕೇಳಿದಾಗ ಆತ ರೈತ ಕೇಳಿದ 5000 ರೂ ಹಣವನ್ನು ತೆಗದು ಕೂಟ್ಡು ನಂತರ ಎಟಿಎಂನ್ನ ಬದಲಿಸಿ, ಕೋಡ್ ನ್ನು…

Read More

ವಿದ್ಯಾರ್ಥಿಗಳ ಮೇಲೆ ಗಾಂಜಾ ಅಫೀಮ ಮದ್ಯಪಾನ ಲೈಂಗಿಕ ಕಿರುಕುಳ ತಡೆಯುವಂತೆ ಯುವ ಕರ್ನಾಟಕ ಭೀಮ್ ಸೇನೆಯಿಂದ ಬೃಹತ್ ಪ್ರತಿಭಟನೆ…!!

ಗದಗ ಜಿಲ್ಲೆಯದಾಂತ್ಯ ಹೆಣ್ಣು ಮಕ್ಕಳು ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಅಕ್ರಮವಾಗಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಕೆಲವು ಕಾಲೇಜುಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದ್ದರಿಂದ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆಅಲ್ಲಿಯ ಸ್ಥಳೀಯ ಹುಡುಗರಿಂದ ಕುಡಿದ ಮತ್ತಿನಲ್ಲಿ. ವಿದ್ಯಾರ್ಥಿಗಳ ಮೇಲೆ ಗಾಂಜಾ ಅಫೀಮಮದ್ಯಪಾನ ಲೈಂಗಿಕ ಕಿರುಕುಳ ನೀಡುತ್ತಿರುವುದು ಕೇಳಿ ಬರ್ತಾ ಇದೆ. ಮಾನ್ಯ ಉಪವಿಭಾಗಾಧಿಕಾರಿ ಅಧಿಕಾರಿಗಳು ಇತ ಕಡೆ ಗಮನಹರಿಸಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಮಾಡುವವರು ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವರ ಮೇಲೆ…

Read More

ಮೆಸೇಜ್ ಓಪನ್ ಮಾಡಿ 8.84 ಲಕ್ಷ ಕಳೆದುಕೊಂಡ ಉದ್ಯಮಿ

ರಾಮನಗರ ನಗರದ ಯಾರಬ್ ನಗರದ ನೂರಾನಿ ಮಸೀದಿ ಬಳಿಯ ವಾಸಿಯಾದ ಉದ್ಯಮಿ ಸಲ್ಮಾನ್ ಖಾನ್ ಪಾರ್ಟ್ ಟೈಮ್ ಜಾಬ್ ಮೆಸೇಜ್ ಓಪನ್ ಮಾಡಿ ಉದ್ಯಮಿಯೊಬ್ಬರು 8.84 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಹಣ ಕಳೆದುಕೊಂಡವರು. ಸಲ್ಮಾನ್ ಖಾನ್ ರವರ ಮೊಬೈಲ್ ಗೆ ವಾಟ್ಸ್ ಆಪ್ ನಲ್ಲಿ ಆಟೋಮೆಟಿಕ್ ಆಗಿ ಗ್ರೂಪ್ ಕ್ರಿಯೇಟ್ ಆಗಿದ್ದು, ಪಾರ್ಟ್ ಟೈಮ್ ಜಾಬ್ ಎಂಬ ಮೆಸೇಜ್ ಟೆಲಿಗ್ರಾಂ ಲಿಂಕ್ ಬಂದಿದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಟಾಸ್ಕ್ ಗ್ರೂಪ್ ರಚನೆಯಾಗಿದೆ….

Read More

ಅನಾಥ ಬುದ್ಧಿಮಾಂದ್ಯ ಹುಡುಗನನ್ನು ರಕ್ಷಣೆ ಮಾಡಿ ಮಡಿಕೇರಿಯ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಲಾಯಿತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ನಗರದಲ್ಲಿ ಅನಾಥ ಬುದ್ಧಿಮಾಂದ್ಯ ಹುಡುಗ ರಸ್ತೆ ಉದ್ದಕ್ಕೂ ಸುತ್ತುತ್ತಿರುವುದನ್ನು ಗಮನಿಸಿದ ಸಾರ್ವಜನಿಕ ಸೋಮವಾರಪೇಟೆ ವೃತ್ತ ನಿರೀಕ್ಷಕರಿಗೆ ಫೋನ್ ಮುಖಾಂತರ ಸಂಪರ್ಕಿಸಿದಾಗ ಪೊಲೀಸ್ ಸಿಬ್ಬಂದಿಗಳು ಬಂದು ಈ ಹುಡುಗನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಈ ಹುಡುಗ ಬುದ್ದಿಮಾಂದ್ಯ ಹುಡುಗ ಎಂದು ಗೊತ್ತಾಗುತ್ತದೆ ಈ ಹುಡುಗನ ಹೆಸರು ಹೇಮಂತ್ ಇವರ ತಂದೆ ಹೆಸರು ಕೇಳಿದರೆ ಬೆಂಗಳೂರಿನ ಲಗ್ಗೆರೆ ನಿವಾಸಿಯಾದ ವೆಂಕಟಪ್ಪ ಹಾಗೂ ಇವರ ತಾಯಿಯ ಹೆಸರು ಪವಿ ಎಂದು ಹೇಳುತ್ತಿದ್ದಾರೆ ಆದರೆ ಇವರ ಕಡೆ…

Read More

ಹರಿಶ್ಚಂದ್ರ ಘಾಟ್ ವಾರಣಾಸಿಯಲ್ಲಿ ಸ್ಮಶಾನ ಸ್ಥಳವಾಗಿ ಕಾರ್ಯನಿರ್ವಹಿಸುವ ಪವಿತ್ರ ಘಾಟ್ ಆಗಿದೆ.        

ಪೌರಾಣಿಕ ಭಾರತೀಯ ದೊರೆ ಹರಿಶ್ಚಂದ್ರನ ಹೆಸರನ್ನು ಇಡಲಾಗಿದ್ದು, ಹರಿಶ್ಚಂದ್ರ ಘಾಟ್ ವಾರಣಾಸಿಯಲ್ಲಿ ಸ್ಮಶಾನ ಸ್ಥಳವಾಗಿ ಕಾರ್ಯನಿರ್ವಹಿಸುವ ಪವಿತ್ರ ಘಾಟ್ ಆಗಿದೆ. ದಂತಕಥೆಯ ಪ್ರಕಾರ, ರಾಜ ಹರಿಶ್ಚಂದ್ರನು ದೇವರಿಗೆ ತಾನು ಬುದ್ಧಿವಂತ ರಾಜನೆಂದು ಸಾಬೀತುಪಡಿಸಲು ತನ್ನ ಸ್ವಂತ ಪ್ರದೇಶ ಮತ್ತು ಅಧಿಕಾರವನ್ನು ಬಿಟ್ಟುಕೊಟ್ಟನು; ಅವರ ಪತ್ನಿ ಮತ್ತು ಮಕ್ಕಳು ಸಂತ ವಿಶ್ವಾಮಿತ್ರನಿಗೆ ನೀಡಿದ ಭರವಸೆಯನ್ನು ಪೂರೈಸಿದರು. ಇತ್ತೀಚಿನ ದಿನಗಳಲ್ಲಿ, ಇದು ಹಿಂದೂಗಳಿಗೆ ಪೂಜ್ಯ ಅಂತ್ಯಕ್ರಿಯೆಯ ಸ್ಥಳವಾಗಿದೆ.        ಹರಿಶ್ಚಂದ್ರ ಘಾಟ್ ಗಂಗಾ ನದಿಯ ಉದ್ದಕ್ಕೂ ಸ್ಮಶಾನ ಸ್ಥಳವಾಗಿ ಕಾರ್ಯನಿರ್ವಹಿಸುವ ಎರಡು…

Read More

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿ ವೇಗವಾಗಿ ವಾಹನವನ್ನು ಚಲಾಯಿಸಿದರೆ ಬೀಳುತ್ತೆ ದಂಡ!

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಚಾಲಕರು/ವಾಹನ ಸವಾರರ ಅತಿವೇಗದ ಚಾಲನೆ ಈ ಅಪಘಾತಗಳು ಉಂಟಾಗುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತಿರುವುದನ್ನು ಗಮನಿಸಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸದರಿ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿದ್ದು, ಕಾನೂನಾತ್ಮಕವಾಗಿ ನಿಗದಿಪಡಿಸಲಾಗಿರುವ ಪ್ರತಿ ಗಂಟೆಗೆ 80…

Read More