ರಾಮದುರ್ಗದಲ್ಲಿ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ.
ರಾಮದುರ್ಗ ತಾಲೂಕಿನಾದ್ಯಂತ ಸೇರಿದಂತೆ ಗಣೇಶ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಜನರು ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ಹಾಗೆಯೇ ಕೆಲವು ಆಯ್ದ ಸ್ಥಳಗಳಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಗರಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಪ್ರತಿಷ್ಠಾಪನೆ : ಪಟ್ಟಣದ ವಾಜಪೇಯಿ ನಗರ, ಗಾಂಧಿನಗರ, ವಡ್ಡರ ಓಣಿ, ಮಡ್ಡಿಓಣಿ, ಜುನೀಪೇಠ, ಈಟಿಓಣಿ, ನವೀಪೇಠ, ರಾಧಾಪೂರಪೇಠ, ಕಾಶಿಪೇಠ,ನಾರಾಯಣಪೇಠ, ನಿಂಗಾಪೂರಪೇಠ, ಬಾಣಕಾರಪೇಠ, ತೇರಬಜಾರ, ನಾಗಪ್ಪನಕಟ್ಟಿಯಾನಂಪೇಠ,…
