ಲಿಂಗಾಯತ ಸಂಘಟನೆ ವತಿಯಿಂದ ಮಹಾಪೌರ ಮತ್ತು ಉಪ ಮಹಾಪೌರರಿಗೆ ಸನ್ಮಾನ –
ಕಾಯಕವೇ ಕೈಲಾಸ ತತ್ವದಂತೆ ಬೆಳಗಾವಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ – ಮಹಾಪೌರ ಪ್ರೀತಿ ಕಾಮಕರ ಸರ್ವರ ಆಶಯದಂತೆ ಜಾತಿ, ಭಾಷೆ, ಧರ್ಮ, ಭೇದಭಾವ ತೊರೆದು ಬಸವಣ್ಣವರ ಕಾಯಕ ತತ್ವದಡಿಯಲ್ಲಿ ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗುವದರ ಜೊತೆಗೆ ಮೊದಲ ಪ್ರಯತ್ನದಲ್ಲಿ ಅತ್ಯಂತ ಜವಾಬ್ದಾರಿಯುತ ಮಹಾಪೌರ ಹುದ್ದೆ ನೀಡಿದ್ದು ಜವಾಬ್ದಾರಿಗೆ ತಕ್ಕಂತೆ ಸರ್ವರ ಸಹಾಯ,ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ನೂತನವಾಗಿ ಮಹಾಪೌರರಾಗಿ ಆಯ್ಕೆಯಾದ ಪ್ರೀತಿ ಕಾಮಕರ ರವಿವಾರ ದಿ.22 ರಂದು ಬೆಳಗಾವಿಯ…
