ಪೌರತ್ವ ಕಾಯ್ದೆ ವಿರೋಧಿಸಿ ರಾಮದುರ್ಗ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ರಾಮದುರ್ಗ: ಸಾರ್ವತ್ರಿಕ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವು ಪೌರತ್ವಕಾಯಿದೆ ಕುರಿತು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿ ಕೋಮು ಧ್ರುವೀಕರಣವನ್ನುಚುರಕುಗೊಳಿಸುವ ಮತ್ತು ಚುನಾವಣೆಯಲ್ಲಿ ಲಾಭಗಳಿಸುವ ಸ್ಪಷ್ಟ ಗುರಿಯನ್ನು ಹೊಂದಿದೆ.ಪೌರತ್ವ ಕಾಯಿದೆ ವಿರೋಧಿಸಿದ್ದ ಸರಕಾರಗಳನ್ನು ಹೊರಗಿಡುವ ಉದ್ದೇಶವು ಈ ಕಾಯಿದೆ ಹಿಂದೆಇದೆ. ಇಂತಹ ಕೋಮು ಧ್ರುವೀಕರಣ ಪೌರತ್ವ ಕಾಯಿದೆ ನಮಗೆ ಬೇಡ ಎಂದು ರಾಮದುರ್ಗದ ವಿವಿಧ ಸಂಘಟನೆಗಳ ಮುಖಂಡರು ತಹಶೀಲ್ದಾರ ಮೂಲಕ ರಾಷ್ಟ್ರಪತಿಯವರಿಗೆ ಮನವಿಸಲ್ಲಿಸಿದರು.2019 ಡಿಸೆಂಬರ್ 31ಕ್ಕೆ ಸಂಸತ್ತಿನಲ್ಲಿ ಅಂಗೀಕಾರವಾದ ಪೌರತ್ವ ಕಾಯಿದೆ ಜಾರಿ ಮಾಡಲು ನಾಲ್ಕು ವರ್ಷಗಳಿಂದ ಸುಮ್ಮನಿದ್ದು, ಈಗ…
