ಅಂಗನವಾಡಿ ಕೇಂದ್ರದಂಲ್ಲಿ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-೨೦೨೫ರ ಅಭಿಯಾನ ಕಾರ್ಯಕ್ರಮ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮಿ ನಗರ ತೋಟದ ಅಂಗನವಾಡಿ ಕೇಂದ್ರದಂಲ್ಲಿ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಪಾಕ್ಷಿಕ-೨೦೨೫ರ ಅಭಿಯಾನದ ಪ್ರಯುಕ್ತ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮ ಸೆ.೨೫ರಂದು ನಡೆಯಿತು. ಬೆಟಗೇರಿ ಗ್ರಾಮದ ಎಲ್ಲಾ ೭ ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಹಾಗೂ ಮತ್ತೀತರ ಪ್ರಮುಖ ಸ್ಥಳಗಳಲ್ಲಿ ಕಸಗೊಡಿಸುವ ಮತ್ತು ಕೇಂದ್ರಗಳ ಮುಖ್ಯ ದ್ವಾರದ ಮುಂದೆ ವಿವಿಧ ಚಿತ್ರಗಳ ರಂಗೋಲಿ ಹಾಕಿದ ಬಳಿಕ ಸ್ವಚ್ಛತೆ ಕುರಿತು ಮಕ್ಕಳು ಮತ್ತು ಸ್ಥಳೀಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು…
