ರಾಮದುರ್ಗ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000/- ರೂ.ಗಳ ದಂಡ ವಿಧಿಸಿದ ಮಾನ್ಯ ನ್ಯಾಯಾಲಯ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ತುರನೂರ ಗ್ರಾಮ ಹದ್ದಿಯಲ್ಲಿ ನಡೆದಿದ್ದ ಘೋರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಕಠಿಣ ಸಜೆ ಹಾಗೂ 25,000/- ರೂ.ಗಳ ದಂಡ ವಿಧಿಸಿ ಇಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ:- ದಿನಾಂಕ: 22-06-2025 ರಂದು ರಾಮದುರ್ಗ ತಾಲೂಕಿನ ಚಿಂಚಖಂಡಿ ಗ್ರಾಮದ ನಿವಾಸಿ ಕೆಂಚಪ್ಪ ಹಣಮಂತ ವಜ್ರಮಟ್ಟಿ ಹಾಗೂ ಫಿರ್ಯಾದಿ ಶ್ರೀಮತಿ ದುಂಡವ್ವ ಕಲ್ಲೋಳೆಪ್ಪ ಮುದೇನಪ್ಪನವರ ಇವರ…
