ಹುತಾತ್ಮ ವೃತ್ತದಲ್ಲಿ ದೇಶಪ್ರೇಮಿಗಳ ದಿನ ಆಚರಣೆ
ರಾಮದುರ್ಗ ನಗರದ ಹುತಾತ್ಮ ವೃತ್ತದಲ್ಲಿ ಸತ್ಕಾರ್ಯ ಫೌಂಡೇಶನ್ ವತಿಯಿಂದ ದೇಶಭಕ್ತನ ಹೆಸರಿನಲ್ಲಿ ದೀಪೋತ್ಸವ ಎಂಬ ಶೀರ್ಷಿಕೆಯಡಿ ದೇಶಪ್ರೇಮಿಗಳ ದಿನ ಆಚರಣೆ ಮಾಡಲಾಯಿತು, 2019 ರ ಫೆಬ್ರವರಿ 14 ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯ ಪರಿಣಾಮ ಹುತಾತ್ಮರಾದ CRPF ಸೈನಿಕರ ಆದಿಯಾಗಿ ದೇಶಕ್ಕಾಗಿ ದುಡಿದ, ಮಿಡಿದ ಹಾಗೂ ಮಡಿದ ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯರಾದ ಮಲ್ಲಿಕಾರ್ಜುನ ಭಾವಿಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸೈನ್ಯ ಹಾಗೂ ಹುತಾತ್ಮರ ಕುರಿತ ಹೆಮ್ಮೆಯ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ…
