ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಕಲ್ಮೇಶ್ವರ ನೂತನ ಮಹಾರಥೋತ್ಸವ ಅದ್ಧೂರಿಯಾಗಿ ಜರಗಿತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಲ್ಲಾಪುರ–ಶಿರಸಂಗಿ ಕ್ಷೇತ್ರದಲ್ಲಿ ಶ್ರೀ ಗುರು ಕಲ್ಮೇಶ್ವರ ಅಜ್ಜನವರ ನೂತನ ಮಹಾರಥೋತ್ಸವವು ಶ್ರಾವಣ ಮಾಸದ ಮೂರನೇ ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.ಮುಳ್ಳೂರು ಹಿರೇಮಠ, ತೋರಗಲ್ಲ ಗಚ್ಚಿನ ಹಿರೇಮಠ ಹಾಗೂ ಕಲ್ಲಾಪುರ ಹಿರೇಮಠದ ಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳಾದ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಹಾಗೂ ಚಿಕ್ಕುಂಬಿ ಕೈಲಾಸ ನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನೂತನ ಮಹಾರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಕಲ್ಮೇಶ್ವರ ಅಜ್ಜನವರ ದರ್ಶನ ಪಡೆದು ಭಕ್ತಿಭಾವ…
